ಗಂಗಾವತಿ ನಗರ ಸಭೆ ಬೇಜವಬ್ದಾರಿ:ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟ ಲೇಔಟ್- ನಿವಾಸಿಗಳ ಜೀವದ ರಕ್ಷಣೆ ಯಾರ ಹೊಣೆ

Gangavathi City Council irresponsible: Layout has become a breeding ground for insects - Who is responsible for protecting the lives of residents?
 

ಗಂಗಾವತಿ ನಗರ ಸಭೆ ಬೇಜವಬ್ದಾರಿ:ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟ ಲೇಔಟ್-ಕಷ್ಟಗಳ ಮಧ್ಯೆಯೇ ನಿವಾಸಿಗಳ ಜೀವನ

ಜಾಹೀರಾತು

ಅಮೃತ ಸಿಟಿ ಯೋಜನೆ ಮೂಲಕ ಸಿಟಿ ಕಾಗದದಲ್ಲಿ ಮಾತ್ರ

ನಗರದ  ಬಹುತೇಕ ಎಲ್ಲಾವಾರ್ಡ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಪ್ರತಿ ಓಣಿಗಳಲ್ಲಿ ತ್ಯಾಜ್ಯ ಸಾಮಾನ್ಯ ರಾಶಿಗಟ್ಟಲೇ ತ್ಯಾಜ್ಯವಿದ್ದರೂ, ವಿಲೇವಾರಿಯಾಗುತ್ತಿಲ್ಲ

ಗಂಗಾವತಿ :ನಗರದ 35ನೇ ವಾರ್ಡ್‌ನಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಾಗಿರುವ ಪ್ರತಿಷ್ಠಿತ ಮಹಾಬಳೇಶ್ವರ ಲೇಔಟ್‌ನಲ್ಲಿ ಯುಜಿಡಿ ಕಳಪೆ ಕಾಮಗಾರಿಯಿಂದ ಬಡಾವಣೆ ಕೊಳಚೆ ಪ್ರದೇಶವಾಗಿದೆ.

ಕಳೆದ 12 ವರ್ಷಗಳಿಂದ ಯುಜಿಡಿ ಕಾಮಗಾರಿ ನಗರದ ನಾನಾ ವಾರ್ಡ್ ಗಳಲ್ಲಿ ನಡೆದಿದೆ. ಆದರೆ ಇದುವರೆಗೂ ಯಶಸ್ವಿಯಾಗಿ ಪೂರ್ಣಗೊಂಡಿಲ್ಲ. 35ನೇ ವಾರ್ಡ್‌ ಮಹಾಬಲೇಶ್ವರ ಲೇಔಟ್‌ನಲ್ಲಿ ಯುಜಿಡಿ ಕಾಮಗಾರಿ ಕೈಗೊಂಡು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಯುಜಿಡಿ ತ್ಯಾಜ್ಯ ಹೋಗಲು ವಾಡ್ ೯ನಿಂದ ಲಿಂಕ್ ಕೊಟ್ಟಿಲ್ಲ. ಹಾಗಾಗಿಯೇ ಡ್ರೈನೇಜ್ ತುಂಬಿಕೊಂಡು ಹೊರಗಡೆ ಲೀಕ್ ಆಗಿ, ಲೇಔಟ್‌ನ ಉದ್ಯಾನವನದ ಪಕ್ಕದಲ್ಲಿ ಸೋರಿಕೆಯಾಗುತ್ತಿದೆ.

ನಗರದ 35ನೇ ವಾರ್ಡ್ನ ಮಹಾಬಲೇಶ್ವರ ಲೇಔಟ್ನಲ್ಲಿ ಯುಜಿಡಿ ತ್ಯಾಜ್ಯ ಸಂಗ್ರಹವಾಗಿರುವುದು. 35ನೇ ವಾರ್ಡ್‌ನಲ್ಲಿ ನಿರ್ಮಿಸಿರುವ ಶೌಚಾಲಯ ನಿರ್ವಹಣೆಯಿಲ್ಲದೇ ಹಾಳಾಗಿರುವುದು. 31ನೇ ವಾರ್ಡ್‌ ಮುಖ್ಯ ರಸ್ತೆ ಹಾಳಾಗಿದ್ದು, ಮಳೆಯಿಂದ ಗುಂಡಿಯಲ್ಲಿ ನೀರು ನಿಂತುಕೊಂಡಿರುವುದು.

ಯುಜಿಡಿ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಹೊರ ಬರುತ್ತಿದ್ದು, ತ್ಯಾಜ್ಯದ ಹೊಂಡವಾಗಿ ನಿರ್ಮಾಣಗೊಂಡಿದೆ. ಯುಜಿಡಿ ಲೀಕ್ ಆಗುತ್ತಿರುವುದು ಅಕ್ಕಪಕ್ಕದ ಮನೆಯವರಿಗೆ ಕೆಟ್ಟ ವಾಸನೆ ಹರಡುತ್ತಿದೆ.

ಅದನ್ನು ಸರಿಪಡಿಸಲು ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎಂಬುದು ಸ್ಥಳೀಯರ ದೂರು  ಲೆಕ್ಕಕ್ಕಿಲ್ಲ.ಸಂದಪಟ್ಟವರಿಗೆ ಪೋನ್ ಮಾಡಿದರೆ ಉತ್ತರಿಸುತ್ತಿಲ್ಲ. ಪತ್ರಿಕೆಯಲ್ಲಿ ಬಂದರು ಲೆಕ್ಕಕಿಲ್ಲ.ನಗರಸಭೆಗೆ ಹೋಗಿ ಕೇಳಿದರೆ ಸೈಟ್ ನಲ್ಲಿಇದ್ದರೆ ಹೇಳುತ್ತಾರೆ.

ಸಾರ್ವಜನಿಕ ಜನಿಕರು ಸಮಸ್ಯೆ ಯಾರಿಗೆ ಹೇಳಬೇಕು ??

  

.

Mallikarjun

Share
Published by
Mallikarjun

Recent Posts

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

4 hours ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

7 hours ago

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…

7 hours ago

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…

8 hours ago