ಕಲ್ಯಾಣಸಿರಿ ವಿಶೇಷ

ಮಹಾನ್ ಕಿಡ್ಸ್ ಶಾಲೆಯಲ್ಲಿಇಂದುವಿಭಿನ್ನ ಮಾಡೆಲ್ ಹಾಗೂ ಆಟಗಳ ಮೂಲಕ ಗಣಿತ ದಿನ ಆಚರಣೆ.

Celebrating Maths Day through different models and games today at Mahan Kids School.

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಗಣಿತ ದಿನವನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಮಕ್ಕಳು ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯ ಮಕ್ಕಳು ಗಣಿತಕ್ಕೆ ಸಂಬಂಧಿಸಿದ ಮಾಡಲ್‌ಗಳನ್ನು ಹಾಗೂ ಗಣಿತದ ಕಾನ್ಸೆಪ್ಟ್ಗಳನ್ನು ಮಕ್ಕಳು ಸುಲಭವಾಗಿ ಪಾಲಕರಿಗೆ ತಿಳಿಸಿದರು. ಗಣಿತ ವಿಷಯ ಮಕ್ಕಳ ಬಾಯಿಯಲ್ಲಿ ನಿರರ್ಗಳವಾಗಿ ಬರುತ್ತಿರುವುದನ್ನು ಪಾಲಕರು ಕೇಳಿ ತುಂಬಾ ಅಚ್ಚರಿಪಟ್ಟರು. ಚಿಕ್ಕ ಚಿಕ್ಕ ಮಕ್ಕಳು ಮಾಡಲ್‌ಗಳನ್ನು ಹಿಡಿದು, ಆ ಮಾಡೆಲ್‌ಗಳನ್ನು ವಿವರಿಸುವ ಕೌಶಲ್ಯವನ್ನು ಹಾಗೂ ಮಕ್ಕಳು ಮಾತನಾಡುವ ಶೈಲಿ ಅವರ ಕಾನ್ಫಿಡೆನ್ಸ್ ಎಲ್ಲವೂ ಅದ್ಭುತವಾಗಿ ಇವೆಯೆಂದು ಪಾಲಕರು ಹೇಳುತ್ತಿದ್ದರು.
ಇದೇ ಸಮಯದಲ್ಲಿ ಪಾಲಕರಿಗಾಗಿ ಹಲವಾರು ಗಣಿತ ಆಟಗಳನ್ನು ಇಡಲಾಗಿತ್ತಿ. ಆ ಆಟಗಳನ್ನು ಪಾಲಕರು ಆಡುತ್ತಾ ಇಷ್ಟೊಂದು ಆಟಗಳು ಗಣಿತದಲ್ಲಿ ಇವೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ಪಾಲಕರು ಹೇಳುತ್ತಿದ್ದರು. ಮಕ್ಕಳು ಪಾಲಕರು ಕೇವಲ ಮೊಬೈಲ್‌ಗಳಲ್ಲಿ ಆಟ ಆಡುವುದನ್ನು ಬಿಟ್ಟು ಈ ಗಣಿತಕ್ಕೆ ಸಂಬಂಧಿಸಿದಂತೆ ಆಟ ಆಡುವುದನ್ನು ಕಲಿತರೆ ಗಣಿತವು ಸುಲಭ ಹಾಗೂ ಮಕ್ಕಳು ಮೊಬೈಲ್‌ಗಳಿಂದ ದೂರ ಇರಬಹುದು.
ಈ ಸಮಯದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ನೇತ್ರಾಜ್ ಗುರುವಿನ ಮಠರವರು ನಮ್ಮ ಶಾಲೆಯಲ್ಲಿ ಗಣಿತಕ್ಕೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ನಮ್ಮ ಮಕ್ಕಳು ಗಣಿತ ವಿಷಯವನ್ನು ಆಟ ಆಡಿದಂತೆ ಕಲಿಯುತ್ತಾರೆ. ಕಳೆದ ಸಾಲಿನಲ್ಲಿ ೧೦ನೇ ತರಗತಿಯ ಎಲ್ಲಾ ಮಕ್ಕಳು ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದು ನೂರಕ್ಕೆ ನೂರು ಅಂಕಗಳನ್ನು ಪಡೆದಿರುವ ಮಕ್ಕಳಿದ್ದಾರೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಮಾತನಾಡಿ ಮಕ್ಕಳಿಗೆ ಪ್ರತಿ ತಿಂಗಳು ಯಾವುದಾದರೂ ಒಂದು ವೇದಿಕೆ ಮೂಲಕ ಮಕ್ಕಳ ಕೌಶಲ್ಯ ಹೊರಗಡೆ ಬರಲು ನೋಡಿಕೊಳ್ಳುತ್ತೇವೆ. ಅದೇ ರೀತಿಯಾಗಿ ಇಂದು ಗಣಿತ ದಿನದಂದು ಮಕ್ಕಳು ತಮ್ಮ ಕೌಶಲ್ಯವನ್ನು ತೋರುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಸಿದ್ದೇಶ್, ಮಂಜುನಾಥ್, ತೇಜಸ್ವಿನಿ, ತಿಮ್ಮಪ್ಪ, ಸಲ್ಲಿನ, ಸೌಜನ್ಯ, ಮಂಜುನಾಥ್, ಕುಮುದಿನಿ, ವಿಜಯಲಕ್ಷ್ಮಿ, ಮುತ್ತ, ಚಂದ್ರಶೇಖರ್ ಹಾಗೂ ಪಾಲಕರೆಲ್ಲರೂ ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

12 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

12 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

12 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

12 hours ago