ಸಿಡಿಲು ಬಡಿದು ಎತ್ತು ಸಾವು- ಪ್ರಕರಣ ದಾಖಲು

Bull died due to lightning – register a case


ಕಾನಹೊಸಹಳ್ಳಿ :- ಸಿಡಿಲು ಬಡಿದು ಎತ್ತು ಮೃತಪಟ್ಟಿರುವ ಘಟನೆ ಗುಂಡು ಮುಣು ಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಡ್ಲಾ ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಸಂಜೆ ಜರುಗಿದೆ.
ಮಾಡ್ಲಾ ಕನಹಳ್ಳಿ ಗ್ರಾಮದ ದೊಡ್ಡಬಾ ಲಪ್ಪ ಎಂಬುವರು ವ್ಯವಸಾಯದ ಕೆಲಸಕ್ಕಾಗಿ ಮೂರು ತಿಂಗಳ ಹಿಂದೆ 85, ಸಾವಿರ ರೂ ಗಳಿಗೆ 2 ಎತ್ತುಗಳನ್ನು ಖರೀದಿ ಮಾಡಿ ಕೊಂಡು ಬಂದಿದ್ದ ಈ ಎರಡು ಎತ್ತುಗಳನ್ನು ಮನೆಯಲ್ಲಿ ಸಾಕಿಕೊಂಡು ಬಂದಿದ್ದ.
9. 2024ರಂದು ದೊಡ್ಡ ಬಾಲಪ್ಪ ಮತ್ತು ಆತನ ಮಗ ಹಾಗೂ ಇತರರು ಜಮೀನಿನಲ್ಲಿ ಜೋಳ ಕುಯ್ಯಲು ಹೋಗಿದ್ದ ರು.ಎತ್ತುಗಳನ್ನು ಹೊಲದ ಬದುವಿನಲ್ಲಿ ಕಟ್ಟಿ ಹಾಕಿದ್ದನು ಸಂಜೆ 6:30 ಸಮಯದಲ್ಲಿ ಗುಡುಗು ಮಿಂಚು ಸಹಿತಮಳೆ ಸುರಿಯುತ್ತಿದ್ದರಿಂದ ಜೋಳ ಕೊಯ್ಯಲು ಬಂದಿರುವ ದೊಡ್ಡ ಬಾಲಪ್ಪ ಮತ್ತು ಮಗ ಇತರರು ಗಿಡಗಳ ಮರೆಯಲ್ಲಿ ಅಮಿತು ಕೊಂಡಿದ್ದೆವು ಸ್ವಲ್ಪ ಹೊತ್ತಿನಲ್ಲಿ ಮಳೆ ಬಿಟ್ಟ ನಂತರ ಬಂದು ಎತ್ತುಗಳನ್ನು ನೋಡಿದಾಗ ಒಂದು ಎತ್ತು ಮೃತಪಟ್ಟಿತ್ತು ಇನ್ನೊಂದು ಎತ್ತನ್ನು ಬೇರೆ ಕಡೆ ಕಟ್ಟಿದ್ದರಿಂದ ಸುರಕ್ಷಿತವಾಗಿ ಇತ್ತು. ಕಷ್ಟಪಟ್ಟು ಕೂಲಿ ಮಾಡಿ ದುಡಿದು ವ್ಯವಸಾಯ ಮಾಡಲಿಕ್ಕೆ ಖರೀದಿ ಮಾಡಿಕೊಂಡು ಬಂದ ಸುಮಾರು 50, ಸಾವಿರ ಬೆಲೆ ಬಾಳುವ ಎತ್ತು ಸಿಡಿಲು ಬಡಿದು ಮೃತಪಟ್ಟಿರುವುದರಿಂದ ಎ ತ್ತಿನ ಸಾವಿನ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ದೊಡ್ಡಬಾ ಲಪ್ಪ ಕೊಟ್ಟ ದೂರಿನಂತೆ ಕಾನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago