Put water on the stone and pray for rain
ಮಾನ್ವಿ :ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ಹಿರಿಯರು ಯುವಕರು ಸಮ್ಮುಖದಲ್ಲಿ
ಅಗಸೆ ಬುಡ್ಡೆಕಲ್ಲಿಗೆ ಯುವಕರು ನೂರಂದು ಕೊಡ ನೀರು ಸುರಿದು ಬಾರಯ್ಯ ಮಳೆರಾಯ ಎಂದು ಪ್ರಾರ್ಥಿಸುತ್ತ ಬುಡ್ಡೆಕಲ್ಲಿಗೆ ಸಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ನಡೆದ ಊರ ದೇವರಿಗೆ ನೀರು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕಳೆದ ಕೆಲ ದಿನಗ ಳಿಂದ ಮಳೆ ಬರದೆ ರೈತರಲ್ಲಿ ದೊಡ್ಡ ಚಿಂತೆ ಮೂಡಿಸಿತ್ತು.ಅದಕ್ಕಾಗಿ ಶ್ರಾವಣ ಮಾಸ ಆರಂಭಗೊಂಡಿದ್ದು ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಜನರು ಭಕ್ತಿಯಿಂದ ದೇವರಿಗೆ ನೀರು ನೀಡಿ ದೇವರಲ್ಲಿ ಪ್ರಾರ್ಥಿಸಿ ನಮ್ಮ ಊರು ಮಾತ್ರವಲ್ಲದೆ ನಾಡಿನೆಲ್ಲೆಡೆ ಉತ್ತಮವಾಗಿ ಮಳೆ ಬಂದು ಜನರಿಗೆ ನೆಮ್ಮದಿ ದೊರೆಯಲೆಂದು ಊರಿನ ಎಲ್ಲಾ ದೇವರಿಗೆ ನೀರು ನೀಡಿ ಪ್ರಾರ್ಥಿಸಲಾಗಿದೆ ಎಂದರು.
ಮಂಗಳವಾರ ಮತ್ತು ಶುಕ್ರ ವಾರ ಸೇರಿ ನಾಲ್ಕು ವಾರಗಳ ಕಾಲ ವಿಶೇಷ ಪೂಜೆ ಕಾರ್ಯಕ್ರಮ ನಡೆದಿದ್ದು, ಈ ಕೊನೆಯ ಮಂಗಳವಾರ ರಂದು ಬೆಳಿಗ್ಗೆಯಿಂದ ವಾದ್ಯಮೇಳಗಳೂಂದಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಗ್ರಾಮ ದೇವತೆ ದ್ಯಾವಮ್ಮ ಮತ್ತು ಚೌಡಮ್ಮ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಈಶ್ವರ್, ಬಸವಣ್ಣ ಸೇರಿದಂತೆ ಗ್ರಾಮದಲ್ಲಿನ ಎಲ್ಲಾ ದೇವಸ್ಥಾನಗಳಿಗೆ ಕೊಡಗಳ ಮೂಲಕ ನೀರು ನೀಡಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಸೇರಿದಂತೆ ಸಮಸ್ತ ಗ್ರಾಮದ ಜನರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…
Verdict in the murder case at the Taluwagera fair: 15 convicts sentenced to 7 years…
The ceremony of the 2025-26 class 10th students of Aaron Mirajkar School began with the…
2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…
Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…
Selected as a civil judge in the first attempt: Santosh Belagode receives grand honours at…