ಗಂಗಾವತಿ: ಸುಮಾರು ೫೦ ವರ್ಷಗಳಿಂದ ನೆನೆಗುದಿಗೆ ಬಿದ್ದ ಆಟೋನಗರ ನಿವೇಶನ ಹಂಚಿಕೆಗೆ ಮನನೊಂದು ಬಹಳಷ್ಟು ಜನ ಸದಸ್ಯರು ಮರಣ ಹೊಂದಿರುತ್ತಾರೆ. ಇಂದು ರಂಗಪ್ಪ ತಿಮ್ಮರಾಜು (೬೭) ಎಂಬುವವರು ಆಟೋನಗರ ನಿವೇಶನ ಹಂಚಿಕೆಯಾಗದಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಕಳೆದ ಹತ್ತು ದಿನಗಳಿಂದ ಹಾಸಿಗೆ ಹಿಡಿದು ನಿನ್ನೆ ಜೂನ್-೧೧ ರಂದು ಮೃತಪಟ್ಟಿದ್ದಾರೆ ಎಂದು ಆಟೋನಗರದ ಹಿರಿಯ ಸದಸ್ಯ ಭಾರಧ್ವಾಜ್ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.
ಆಟೋನಗರ ೧೯೮೫ ರಲ್ಲಿ ಪ್ರಾರಂಭವಾಗಿದ್ದು, ಇಂದಿನವರೆಗೂ ಸರ್ಕಾರಕ್ಕೆ ಭರಿಸಬೇಕಾದ ಎಲ್ಲಾ ಪಾವತಿಗಳನ್ನು ಪಾವತಿಸಿದ್ದರೂ ನೋಂದಣಿ ಆಗಿರುವುದಿಲ್ಲ. ಸುಮಾರು ೨೫ ಜನ ಸದಸ್ಯರು ಈಗಾಗಲೇ ಮರಣ ಹೊಂದಿದ್ದಾರೆ. ಅವರ ನಿವೇಶನಗಳು ಅವರ ಪತ್ನಿಯರ ಹೆಸರಿನಲ್ಲಿ ಮಾಡಲು ಅನೇಕ ಬಾರಿ ಹೋರಾಟ ಮಾಡಿದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ.
ಇದನ್ನೆಲ್ಲ ಗಮನಿಸಿದ ಹಿಂದಿನ ಜಿಲ್ಲಾಧಿಕಾರಿ ಕೆ.ಪಿ ಮೋಹನರಾಜ್ ೯೦ ಜನರ ಸದಸ್ಯರನ್ನು ನಿಗದಿಪಡಿಸಿ ಅವರಿಗೆ ನೋಂದಾಯಿಸಿಕೊಡಲು ನಗರಸಭೆಗೆ ಆದೇಶಿಸಿದ್ದರು. ಆದರೂ ಇಂದಿನವರೆಗೆ ಯಾವುದೆ ನೋಂದಣಿ ಆಗುತ್ತಿಲ್ಲ.
ಸರ್ಕಾರ ಕೂಡಲೇ ಆಟೋನಗರದ ಸ್ಥಿತಿಗತಿಯನ್ನು ಪರಿಶೀಲಿಸಿ ಕೂಡಲೇ ನೋಂದಾಯಿಸಲು ನಗರಸಭೆಗೆ ಆದೇಶಿಸಬೇಕೆಂದು ಕೋರಿ, ಈಗಾಗಲೇ ನಾನು ೭೮ ವರ್ಷದ ವಯೋವೃದ್ಧಿನಾಗಿದ್ದು, ಅನಾರೋಗ್ಯ ಪೀಡಿತನಾಗಿದ್ದೇನೆ. ನಾನು ಜೀವಂತವಿರುವಾಗಲೇ ನಿವೇಶನ ನೋಂದಾಯಿಸಿಕೊಡಬೇಕೆAದು ಕಳಕಳಿಯಿಂದ ಸರ್ಕಾರಕ್ಕೆ ಮನವಿ ಮಾಡಿದರು.
ನನ್ನ ಈ ಬೇಡಿಕೆಗೆ ಪತ್ರಕರ್ತರು, ಸ್ನೇಹಿತರು, ಪ್ರಗತಿಪರರು ಬೆಂಬಲಿಸಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಕೇಳಿಕೊಂಡರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…