Koppala: Roads in Ward No.23 are very bad. A request to build a quality asphalt road is like a mud pit even in rainy season
ಕೊಪ್ಪಳ ನಗರದ ವಾರ್ಡ್ ನಂ.೨೩ ನ ಸಾರ್ವಜನಿಕರು ಮಾನ್ಯ ಪೌರಾಯುಕ್ತರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,
ವಾರ್ಡ್ ನಂ.೨೩ ರಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ಮಳೆಗಾಲದಲ್ಲಂತೂ, ಕೆಸರುಗದ್ದೆಯಂತಾಗಿದೆ. ತುಂಬಾ ದಿನಗಳಿಂದಲೂ ವಾರ್ಡ್ನಲ್ಲಿ ರಸ್ತೆಗಳೇ ಸರಿಯಲ್ಲ. ಅದರಲ್ಲೂ ‘ಗಾಂಧಿನಗರ’ ಎಂಬ ಏರಿಯಾದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಸ.ಹಿ.ಪ್ರಾ.ಶಾಲೆ ಗಾಂಧಿನಗರಕ್ಕೆ ಹೋಗುವ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದೆ. ಶಾಲೆಗೆ ಹೋಗುವ ಹಾಗೂ ಬರುವ ಶಿಕ್ಷಕರ ವಾಹನ ಹಾಗೂ ಪಾಲಕರ ವಾಹನಗಳು ಸುತ್ತು ಬಳಸಿ ಬರುವ ಹಾಗೂ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚ್ಚಾ ರಸ್ತೆಗಳಿಂದಾಗಿ ಹಿಡಿ ಶಾಪ ಹಾಕುತ್ತಾರೆ. ಪ್ರಮುಖವಾಗಿ ಕೊರಮ್ಮ & ದುರುಗಮ್ಮ ದೇವಿ ದೇವಸ್ಥಾನದಿಂದ ಹಿಡಿದು ಶಾಲಾ ಮಾರ್ಗವಾಗಿ ದುರುಗಪ್ಪ ಕನಕಮೈಲಿ ಮನೆಯ ವರೆಗೆ ಮತ್ತು ಒಂಟೇಲಿ ಗಂಗಪ್ಪನ ಮನೆಯಿಂದ ಕನಕಮೈಲಿ ದುರುಗಪ್ಪನ ಮನೆಯವರೆಗೆ ಹಾಗೂ ಮಶೀದಿಯಿಂದ ಕನಕಮೈಲಿ ದುರುಗಪ್ಪನ ಮನೆಯವರೆಗೆ ಮತ್ತು ಸಂಜೀವಪ್ಪ ದೊಡ್ಮನಿ ಮನೆಯಿಂದ ಸಾಬಪ್ಪ ಡಂಬಳ ಮನೆಯ ಮುಖಾಂತರ ದುರುಗಪ್ಪ ಕನಕಮೈಲಿ ಮನೆಯವರೆಗೆ ರಸ್ತೆಗಳ ನಿರ್ಮಾಣ ಮಾಡಬೇಕು.
ಈಗಾಗಲೇ ಮಳೆಗಾಲ ಆರಂಭವಾಗಿರುವುದರಿAದ ಮಳೆ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ ಈಗಲಾದರೂ ನಗರಸಭೆಯವರು ಮುತುವರ್ಜಿವಹಿಸಿ ಹೊಸ ರಸ್ತೆಗಳ ನಿರ್ಮಾಣ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು. ಒಳ್ಳೆಯ ಗುಣಮಟ್ಟದ ಡಾಂಬರ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಕೊಳಚೆ ಪ್ರದೇಶವಾಗಿರುವುದರಿಂದ ವ್ಯವಸ್ಥೆಯ ನಿರ್ಲಕ್ಷö್ಯಕ್ಕೆ ಒಳಗಾಗುವ ಸಂಭವ ಬಹುತೇಕ ಇರುವುದರಿಂದ ಶಾಶ್ವತವಾಗಿ ಒಮ್ಮೆ ಡಾಂಬರ್ ರಸ್ತೆಗಳ ನಿರ್ಮಾಣವು ತುಂಬಾ ಅಗತ್ಯ ಇದೆ.
ಮಾನ್ಯ ಪೌರಾಯುಕ್ತರು ವಾರ್ಡ ನಂ.೨೩ ಗಾಂಧಿನಗರಕ್ಕೆ ಒಮ್ಮೆ ವೀಕ್ಷಿಸಿ ವಸ್ತುಸ್ಥಿತಿಯನ್ನು ಗಮನಿಸಿ, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ಡಾಂಬರ್ ರಸ್ತೆ ನಿರ್ಮಿಸಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತೀರೆಂದು ನಂಬುತ್ತಾ, ವಾರ್ಡ್ನ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರೆಂದು ಮತ್ತೊಮ್ಮೆ ವಿನಂತಿಸುತ್ತಾ ಈ ಮನವಿಯನ್ನು ಮಾನ್ಯ ಪೌರಾಯುಕ್ತರು ನಗರಸಭೆ ಕೊಪ್ಪಳÀ ಇವರಿಗೆ ವಾರ್ಡ್ ನ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರುಂ
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…