Punyakala and Pralayakala
ಪುಣ್ಯವುಳ್ಳ ಕಾಲಕ್ಕೆ ಹಗೆಗಳು ತನ್ನವರಹರು.
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಹುದು
ಪುಣ್ಯವುಳ್ಳ ಕಾಲಕ್ಕೆ ಹಾವು ಲೇವಳವಹುದು.
ಪುಣ್ಯವುಳ್ಳ ಕಾಲಕ್ಕೆ ಅನ್ಯರು ತನ್ನವರಹರು
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಹುದು;
ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದು
ಇಂತಪ್ಪ ಭಕ್ತಿಯೂ ಪುಣ್ಯವು ಚನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯಾ, ಲಿಂಗದೇವ
-ಗುರು ಬಸವಣ್ಣನವರು
(ಹಗೆ = ಶತ್ರು; ಲೇವಳ = ಬಂಗಾರದ ಸರ; ಕೂಡಲಸಂಗಮದೇವ = ಲಿಂಗದೇವ)
ಸಜ್ಜನತ್ವದಿಂದ ಮಾಡುವ ಸತ್ಕಾರ್ಯಗಳ ಮೊತ್ತವೇ ಪುಣ್ಯ. ಪುಣ್ಯ ಕಾರ್ಯಗಳನ್ನು ಮಾಡಿದಾಗ ಪುಣ್ಯದ ಮೊತ್ತ ಹೆಚ್ಚಾದಾಗ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಅತ್ಯಂತ ಸರಳವಾಗಿ ಹೇಳಿದ್ದಾರೆ.
ಇಂತಹ ಪವಾಡಗಳನ್ನು ಮಾಡಬಲ್ಲ ಪುಣ್ಯವು ಭಕ್ತಿಯಿಂದ ಬರುತ್ತದೆ. ವ್ಯಕ್ತಿ ಭಕ್ತಿವಂತನಾಗುತ್ತ ಹೋದಂತೆ ಅವನಲ್ಲಿರುವ ದೇಹಗುಣ, ಮನೋಗುಣಗಳು ಅಳಿದು ದೈವೀಗುಣಗಳು ನೆಲೆಗೊಳ್ಳುತ್ತವೆ. ಇದರಿಂದ ಅವನು ಸತ್ಕಾರ್ಯ ಮಾಡುತ್ತಾನೆ. ಎಲ್ಲೆಲ್ಲಿಯೂ ದೇವರ ಚೈತನ್ಯವನ್ನು ಕಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಕುಲಜನಾಗಿ ಪುಣ್ಯವಂತನಾಗುತ್ತಾನೆ.
ಭಕ್ತಿ ಕೆಟ್ಟುಹೋದರೆ, ಭಕ್ತಿ ತೋರಿಕೆಯ ಭಕ್ತಿಯಾದರೆ; ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ ಪುಣ್ಯವು ಕೆಟ್ಟುಹೋಗುತ್ತದೆ. ಗುರುಚೆನ್ನಬಸವಣ್ಣನವರು ಬಾಲ್ಯದಿಂದಲೂ ಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ಸತ್ಕಾರ್ಯಗಳನ್ನು ಮಾಡಿ ಪುಣ್ಯವಂತರಾದವರು. ಇದನ್ನು ನೋಡಿ ನನಗೆ ಆನಂದವಾಗಿದೆ ಎಂದು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳಿದ್ದಾರೆ.
ಈ ವಚನವನ್ನು ಅವಧಾನದಿಂದ ಅವಗ್ರಹಿಸಿಕೊಂಡರೆ ಇನ್ನೂ ಕೆಲವು ವಿಚಾರಗಳು ಮುಗಿಲ ಮರೆಯ ಮಿಂಚಿನಂತೆ ಇದರಲ್ಲಡಗಿವೆ.
ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…