ಕಲ್ಯಾಣಸಿರಿ ವಿಶೇಷ

ಜನಪ್ರತಿನಿಧಿಗಳ ಆಮೀಷಕ್ಕೆಆಟೋನಗರ ಬಲಿತುಚ್ಛವಾಗಿ ಕಾಣುವ ಪೌರಾಯಕ್ತರ ವಿರುದ್ಧಉಗ್ರಹೋರಾಟ: ಜೆ. ಭಾರದ್ವಜ್

Autonagar has fallen victim tothelureofpublicrepresentativesFierce struggle against poor-looking citizens: J. Bharadwaj


ಗಂಗಾವತಿ: ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ ಆಟೋ ನಗರದ ವಿನ್ಯಾಸ ಬದಲಾಯಿಸಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ ೩೦ಕ್ಕು ಹೆಚ್ಚು ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಇರಾದೆ ಹೊಂದಿದ್ದಾರೆ ಎಂದು ಕಾರ್ಮಿಕ ಮುಖಂಡ ಜೆ.ಭಾರಧ್ವಜ್ ಅಕ್ರೋಶ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೪ ರಲ್ಲಿದ್ದ ಡಿಸಿ ಮೋಹನ್ ಆದೇಶ ದಿಕ್ಕರಿಸಿ, ಮತ್ತೆ ಇತ್ತೀಚಿಗೆ ನ್ಯಾಯಾಲಯದ ನೀಡಿದ ನಿರ್ದೇಶನವನ್ನು ಕಡೆಗಣಿಸಿ ಪೌರಾಯುಕ್ತರು ಏಕಪಕ್ಷೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೆ ರಸ್ತೆಗೆ ಆಟೋ ನಗರದ ಕೆಲವರ ಪ್ಲಾಟ್‌ಗಳಲ್ಲಿನ ಸ್ಥಳ ಬಿಟ್ಟುಕೊಡಲಾಗಿದೆ ಮತ್ತೆ ನೀರಿನ ಟ್ಯಾಂಕ್ ಕಟ್ಟಲು ನಿವೇಶನ ಸ್ಥಳವಕಾಶ ಒದಗಿಸಲಾಗಿದೆ ಆದರೂ ನಗರಸಭೆ ಸದಸ್ಯರಿಗೆ ಇರುವ ಅಧಿಕಾರ ದಾಹದಿಂದಾಗಿ ಆಟೋ ನಗರದ ನಿವಾಸಿಗಳಿಗೆ ಪ್ಲಾಟ್ ದೊರೆಯುತ್ತಿಲ್ಲ ತೀವ್ರ ಸಂಕಷ್ಟದಲ್ಲಿರುವ ಈ ಜನರ ಒಳಿತಿಗಾಗಿ ಸ್ಥಳೀಯ ಶಾಸಕ ಜನಾರ್ದನರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ರಮಕ್ಕೆ ಮುಂದಾಗಬೇಕೆಂದು ಭಾರದ್ವಜ್ ಒತ್ತಾಯಿಸಿದರು.
ಆಟೋ ನಗರ ಸಂಚಾಲಕ ದೊರೇರಾಜು ಮಾತನಾಡಿ, ಪೌರಾಯುಕ್ತ ವಿರುಪಾಕ್ಷ ಮೂರ್ತಿಯವರ ನಡೆಯನ್ನು ನಾವು ಖಂಡಿಸುತ್ತೇವೆ, ಕಾರ್ಮಿಕರಿಗೆ ಕಿಂಚತ್ತು ಬೆಲೆ ಕೊಡುವುದಿಲ್ಲ, ಕೀಳಾಗಿ ನೋಡುತ್ತಿರುವುದು ಖೇದಕರ, ದಶಕಗಳ ಹಿಂದೆ ನಾವು ಮುಕ್ಕುಂದಿ ಕುಟುಂಬದಿಂದ ಭೂಮಿ ಖರೀದಿಸಿ ಲೇಔಟ್ ಮಾಡಿಕೊಡಲು ನಗರಸಭೆಗೆ ರಿಜಿಸ್ಟರ್ ಮಾಡಿಕೊಡಲಾಗಿತ್ತು, ಕಾರ್ಮಿಕರೇ ಹಣ ಕೊಟ್ಟು ಭೂಮಿ ಖರೀದಿಸಿದ್ದು, ಆದರೆ ನಗರಸಭೆ ಪೌರಾಯುಕ್ತರು ಬದಲಾದಂತೆ ಮಾಹಿತಿ ಕೊರತೆಯಿಂದ ಮೆಕಾನಿಕ್‌ಗಳಿಗೆ ತುಂಬಾ ಸತಾಯಿಸುತ್ತಿದ್ದಾರೆ ೯೦ಕ್ಕು ಹೆಚ್ಚು ಕುಟುಂಬಗಳು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಆಟೋ ನಗರದ ನಿವಾಸಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದು ಶೀಘ್ರ ಬಗೆಹರಿಸಿ ಕಾರ್ಮಿಕರು ಅಲ್ಲಿ ಜೀವಿಸಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮೆಕಾನಿಕ್ ಬಿ.ಶ್ರೀನಿವಾಸ್, ಬಿ.ಪ್ರಕಾಶ್, ಮೆಕಾನಿಕ್ ಲಾರಿ ಮೆಕಾನಿಕ್ ಹಾಗು ಭಾಷು ಟ್ರಾಕ್ಟರ್ ಇತರರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

19 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

19 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

20 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

20 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

20 hours ago