Breaking News

ಸವಿತಾ ಸಮಾಜದವತಿಯಿಂದಶ್ರೀ ಶಂಕುಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೩ನೇ ವರ್ಷದ ಹನುಮಾನ್ ಜಯಂತ್ಯೋತ್ಸವ

By Savita Samajwathy
23rd Hanuman Jayantyotsava at Sri Shankuchakra Anjaneya Swamy Temple

ಗಂಗಾವತಿ: ಗಂಗಾವತಿಯ ಸವಿತಾ ಸಮಾಜದ ಬಾಂಧವರಿAದ ಇಂದು ಮಂಗಳವಾರ ಶ್ರೀ ಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೩ನೇ ವರ್ಷದ ಹನುಮಾನ್ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಒಃBS ಪದವಿಯನ್ನು ಪಡೆದಿರುವಂತಹ ಗಂಗಾವತಿಯ ಕುಮಾರ್ ಡಾಕ್ಟರ್ ನವೀನ್ ನಸಲಾಯ ತಂದೆ ವಿಶ್ವನಾಥ ನಸಲಾಯ ಹಾಗೂ ಕಾರಟಗಿಯ ಕುಮಾರಿ ಡಾಕ್ಟರ್ ವೆನ್ನೆಲ್ಲಾ ತಂದೆ ಜಯರಾಮ್ ಇವರಿಗೆ ಅಭಿನಂದನೆ (ಸನ್ಮಾನ) ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ಈ. ಮಾರೇಶ, ಗಂಗಾವತಿ ತಾಲೂಕ ಅಧ್ಯಕ್ಷರಾದ ಹೆಚ್. ಗೋಪಾಲ್ ಹಾಗೂ ಕಾರಟಗಿಯ ಉಪನ್ಯಾಸಕರಾದ ರಾಮಾಂಜನೇಯಲು ಮಾತನಾಡಿ, ನಮ್ಮ ಸವಿತಾ ಸಮಾಜದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಬೇಕು, ಆ ಮೂಲಕ ಸಮಾಜದ ಶ್ರೇಯೋಭಿವೃದ್ಧಿ ಆಗಲಿದೆ. ನಮ್ಮ ಸಮಾಜವೂ ಕೂಡಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕು ಅಧ್ಯಕ್ಷರಾದ ಮಾರುತಿ ಸೂಗೂರು, ಕೊಪ್ಪಳ ಜಿಲ್ಲಾ ಗೌರವಧ್ಯಕ್ಷರಾದ ಓ.ಙ ಮಹಾಬಲೇಶ್ವರ, ಕೊಪ್ಪಳ ಜಿಲ್ಲಾ ಸಂಘಟಕರಾದ ಏ.ಇ.ಃ ಮೋಹನ್, ಗಂಗಾವತಿ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಈ ತಾಯಪ್ಪ ಹಾಗೂ ಗಂಗಾವತಿಯ ಪದಾಧಿಕಾರಿಗಳಾದ ಇ. ಶ್ರೀನಿವಾಸ್ ಪೊಲೀಸ್, ಆಂಜನೇಯ, ಎಸ್. ಭೀಮೇಶ, ಎಸ್. ನಾಗೇಶ, ದೇವರಾಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಗಂಗಾಮತ ಸಮಜದಿಂದ ಒತ್ತಾಯ

Gangamat Samaj insists that the accused of Anjali’s murder should be punished severely ಗಂಗಾವತಿ.ಮೇ.15: ಹುಬ್ಬಳ್ಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.