ಸಿದ್ಧಾರ್ಥ ಎಜ್ಯುಕೇಷನಲ್ ಆಂಡ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹೊಲಿಗೆ ಯಂತ್ರಗಳ ವಿತರಣೆ.

ಸಿದ್ಧಾರ್ಥ ಎಜ್ಯುಕೇಷನಲ್ ಆಂಡ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹೊಲಿಗೆ ಯಂತ್ರಗಳ ವಿತರಣೆ.

Distribution of sewing machines by Siddhartha Educational and Social Welfare Trust.

ಗಂಗಾವತಿ: ಸಿದ್ಧಾರ್ಥ ಎಜ್ಯುಕೇಷನಲ್ & ಸೋಷಿಯಲ್ ವೆಲ್‌ಫೇರ್ ಟ್ರಸ್ಟ್
ಗಂಗಾವತಿ ವತಿಯಿಂದ ನಡೆದ ಶ್ರೀಮತಿ ಸಾವಿತ್ರಿಬಾಯಿ ಮತ್ತು ಫಾತೀಮಾ ಶೇಖ್
ಅವರ ಜಯಂತಿ ಅಂಗವಾಗಿ ಹೊಲಿಗೆ ಮಿಷನ್ ವಿತರಣೆ ಕಾರ್ಯಕ್ರಮ ಉದ್ಘಾಟನಾ
ಮಾಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾದ ಅಖ್ತರ್ ಅನ್ಸಾರಿ ಸುಪುತ್ರ ಅಯೂಬ್ ಅನ್ಸಾರಿ
ಹಾಗೂ ಕೃಷ್ಣ ಇಟ್ಟಂಗಿ ಮತ್ತು ನಾಗರಾಜ ನಚಿದಾಪೂರ ಭಾಗವಹಿಸಿದ್ದರು. ಉದ್ಘಾಟಿಸಿ
ಮಾತನಾಡಿದ ಅವರು ಮಹಿಳೆಯರಿಗೆ ದೇಶದಲ್ಲಿ ಶಿಕ್ಷಣ ಪಡೆಯುವುದಕ್ಕೆ
ಪ್ರಮುಖ ಪಾತ್ರ ಮಹಾ ನಾಯಕರ ಶ್ರಮ ಎಂದು ತಿಳಿಸಿದರು.
ಸದೃಢ ಆರೋಗ್ಯಕರವಾದ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ ಎಂದ
ಕರಿAಸಾಬ ಪ್ರಶಸ್ತಿ ಪುರಸ್ಕೃತರಾದ ರಮೇಶ ಗಬ್ಬೂರುರವರು ಪ್ರತಿ
ಮಹಿಳೆಯರು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಈ ಮಹಾನ್
ಚೇತನಗಳು, ಈ ನಾಯಕರ ಪರಿಶ್ರಮದಿಂದ ನಾವು ಶಿಕ್ಷಣ ಪಡೆದು,
ಸ್ವಾವಲಂಬಿಯಾಗಿ ಜೀವನ ನಡೆಸುತ್ತಿರುವುದು. ಹಾಗಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣ
ಕೊಡಿಸುವುದು ಪ್ರತಿ ಮಹಿಳೆಯರ ಆಧ್ಯ ಕರ್ತವ್ಯ ಎಂದು ತಿಳಿಸಿದರು.
ಈ ವೇಳೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಚಿಂತಕರಾದ ರಮೇಶ ಸುಗ್ಗೆನಹಳ್ಳಿಯವರು ಸಾವಿತ್ರಮ್ಮ ಬಾಫುಲೆ
ಹಾಗೂ ಫಾತಿಮಾ ಶೇಖ್ ಜಯಂತಿ ಅಂಗವಾಗಿ ಅರ್ಥಪೂರ್ಣವಾಗಿ ಇಂದು ಮಹಿಳೆಯರಿಗೆ
ಸಿದ್ಧಾರ್ಥ ಎಜ್ಯುಕೇಷನಲ್ & ಸೋಷಿಯಲ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ
ನೀಡುತ್ತಿರುವುದು ಮಹಿಳೆಯರ ಕುಟುಂಬಕ್ಕೆ ಅಸರೆಯಾಗಲಿದೆ. ಇದರಿಂದ
ಜೀವನ ರೂಪಿಸಿಕೊಳ್ಳಲು ಇಂತಹ ಕಾರ್ಯವನ್ನು ಮಾಡಿದ್ದು ಬಹಳ ಸಂತೋಷ
ಎAದು ಹೇಳಿದರು.
ಟ್ರಸ್ಟ್ನ ಕಾರ್ಯದರ್ಶಿಗಳಾದ ಹುಸೇನಪ್ಪ ಹಂಚಿನಾಳ ಮಾತನಾಡಿ ನಮ್ಮ
ಟ್ರಸ್ಟ್ನಿಂದ ಇನ್ನೂ ಅನೇಕ ಕಾರ್ಯಗಳನ್ನು ಮಾಡುವದರ ಜೊತೆಗೆ
ಶಿಕ್ಷಣಕ್ಕಾಗಿ ಹೆಚ್ಚಾಗಿ ಧನಸಹಾಯ ಮಾಡಲಾಗುತ್ತದೆ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ
ವ್ಯಾಸಂಗದಲ್ಲಿ ಹೆಚ್ಚು ಅಂಕಗಳೊAದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ
ಸನ್ಮಾನಿಸಲಾಯಿತು.
ಹೊಲಿಗೆ ಯಂತ್ರಗಳನ್ನು ೧) ಮಂಜುಳಾ ತಂದೆ ಪಂಪಣ್ಣ ಬಂಡೆ, ೨) ಸುನಿತಾ
ಗಂ ರಾಘವೇಂದ್ರ, ೩) ನಾಗಮ್ಮ ತಂದೆ ಹುಲಗಪ್ಪ ಗುಗ್ರಿ, ೪) ಪವಿತ್ರ ಗಂಡ
ಕಾAತಪ್ಪ ಬಾವಜಿ, ೫) ಜೈತ್ರ ತಂದೆ ಹನುಮಂತಪ್ಪ ಸಪಾಯಿ, ೬) ಅಂಬಮ್ಮ ಗಂ
ಹನುಮAತ ಸಪಾಯಿ, ೭) ಅನಿತಾ ಗಂಡ ಹನುಮಂತ ತೆಕ್ಕಲಕೋಟೆ, ೮) ವಿಶಾಲಾಕ್ಷಿ
ಗಂಡ ಸುನಿಲಾ ಅರತಿ, ೯) ಸೌಂದರ್ಯ ತಾಯಿ ನೀಲಮ್ಮ ದೊಡ್ಡಮನಿ, ೧೦) ಲಕ್ಷ್ಮಿ ಬಾಯಿ
ಗಂಡ ಶಿವರಾಜ ಸಿಂಗ್, ೧೧) ಪುಷ್ಪವತಿ ಗಂಡ ಶರಣಬಸವ ಕಂಪ್ಲಿ
ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ
ಗೋಟೂರು, ಗಂಗಾವತಿ ಸಾರ್ವಜನಿಕ ಉಪವಿಭಾಗ ಆಸ್ಪತ್ರೆಯ ಆರೋಗ್ಯ ಸಮಿತಿ
ಸದಸ್ಯರಾದ ಹೊನ್ನೂರಸಾಬ್, ಸುರೇಶ್ ಲಾಕಿ, ಗೋಪಾಲಕೃಷ್ಣ ಹಂಚಿನಾಳ,
ರAಜನಿ ಆರತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

8 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

9 hours ago