ಕಾರ್ಖಾನೆ, ಯೋಜನಾ ಅಭಿವೃದ್ಧಿಯನ್ನೇ ಮಾನವನ ಸುಸ್ಥಿರ ಅಭಿವೃದ್ಧಿ ಎನ್ನಲಾಗದು: ಮಂಡ್ಯ ಅಭಿಗೌಡ

ಕಾರ್ಖಾನೆ, ಯೋಜನಾ ಅಭಿವೃದ್ಧಿಯನ್ನೇ ಮಾನವನ ಸುಸ್ಥಿರ ಅಭಿವೃದ್ಧಿ ಎನ್ನಲಾಗದು: ಮಂಡ್ಯ ಅಭಿಗೌಡ

Factory and project development alone cannot be called sustainable human development: Mandya Abhi Gowda

ಕೊಪ್ಪಳ: ನಗರಸಭೆ ಆವರಣದಲ್ಲಿ 33 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿಯಿಂದ ನಗರಕ್ಕೆ ಹೊಂದಿಕೊಂಡ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಗ್ರಾಮದ ಜನರ ಬಳಕೆಗೆ ಮುಕ್ತವಾಗಿಡಲು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಗೆ ನಾವು ದ್ರಾವಿಡ ಕನ್ನಡಿಗರು ಚಳುವಳಿ ಬೆಂಬಲಿಸಿತು.
ಧರಣಿ ಬೆಂಬಲಿಸಿ ಮಾತನಾಡಿದ ದ್ರಾವಿಡ ಕನ್ನಡಿಗರು ಚಳವಳಿಯ ಮುಂದಾಳು ಮಂಡ್ಯ ಅಭಿಗೌಡ ಒಕ್ಕಲಿಗ ಮಾತನಾಡಿ ರಾಜಕಾರಣಿಗಳು ಯೋಜನಾ ಅಭಿವೃದ್ಧಿಯ ಹಿಂದೆ ಬೀಳುತ್ತಾರೆ. ಅವರ ಮೇಲೆ ನಾವು ಮೊದಲು ಜನಾಭಿವೃದ್ಧಿ ಮಾಡುವಂತೆ ಒತ್ತಡ ಹೇರಬೇಕು. ಸುಸ್ಥಿರ ಅಭಿವೃದ್ಧಿ ಕಾರ್ಖಾನೆಗಳಿಂದ ಮಾತ್ರವಲ್ಲ. ಅದು ಮಾನವನ ಆರೋಗ್ಗ, ಆಯುಷ್ಯ ಒಳಗೊಂಡರಷ್ಟೇ ಸರಿ. ಕೊಪ್ಪಳ ಈ ಅಭಿವೃದ್ಧಿಗೆ ಕೊಳ್ಳಿ ಇಟ್ಟ ಕಾರ್ಖಾನೆಗಳನ್ನು ಹಿಮ್ಮೆಟ್ಟಿಸಲು, ಜಿಲ್ಲೆಯ ಜನರ ಅಭಿವೃದ್ಧಿಗೆ ಒಂದು ನೀಲ ನಕ್ಷೆ ತಯಾರಿಸಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದರು.
ದ್ರಾವಿಡ ಚಳವಳಿಯ ಯಮನೂರಪ್ಪ ಹಳ್ಳೇರ, ಹೋರಾಟ ವೇದಿಕೆಯ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಾನವ ಬಂಧುತ್ವ ವೇದಿಕೆಯ ರಣದಪ್ಪ ಸುಂಕಣ್ಣವರ, ಮಂಜುನಾಥ ಕವಲೂರು, ನಿವೃತ್ತ ಪ್ರಿನ್ಸಿಪಾಲರು ಎಸ್.ಬಿ.ರಾಜೂರು, ನಿವೃತ್ತ ಕೋರ್ಟ್ ಅಧೀಕ್ಷಕರು ಜಿ.ಬಿ.ಪಾಟೀಲ್, ಪ್ರಕಾಶಕರು ಡಿ.ಎಂ.ಬಡಿಗೇರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ನಿವೃತ್ತ ಎಸ್.ಜಿ.ಕಾಲೇಜ್ ಅಧೀಕ್ಷಕರು ಎಫ್.ಎಸ್.ಜಾಲಿಹಾಳ, ಕಾಶಪ್ಪ ಚಲವಾದಿ ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago