ದ.ಸಂ.ಸ ಭೀಮವಾದ 9ನೇ ದಿನದ ಸತ್ಯಾಗ್ರಹದ ನೇತೃತ್ವ ದಲಿತ ಮುಖಂಡ ನಾಗರಾಜ ಸಃಗಾಪುರ ಕಾರ್ಖಾನೆ ವಿರುದ್ಧ ಕಿಡಿ

Dalit leader Nagaraj leads 9th day of Bhimavad Satyagraha against Sahagapur factory

ದ.ಸಂ.ಸ ಭೀಮವಾದ 9ನೇ ದಿನದ ಸತ್ಯಾಗ್ರಹದ ನೇತೃತ್ವ ದಲಿತ ಮುಖಂಡ ನಾಗರಾಜ ಸಃಗಾಪುರ ಕಾರ್ಖಾನೆ ವಿರುದ್ಧ ಕಿಡಿ

ಕೊಪ್ಪಳ : ನಗರಕ್ಕೆ ಹೊಂದಿಕೊಂಡ ಬಲ್ಡೋಟ (ಬಿಎಸ್ಪಿಎಲ್) ವಿಸ್ತರಣೆ ಬೇಡ, ಎಂ.ಎಸ್.ಪಿ.ಎಲ್. ಅತಿಕ್ರಮಣದಿಂದ ಕಾಂಪೌಂಡ್ ಹಾಕಿರುವ 44.35 ಎಕರೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, 20 ಕಾರ್ಖಾನೆ ದೂಳು ಬಾಧಿತ ಜನರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿ 9ನೇ ದಿನದಲ್ಲಿ ಮುಂದುವರೆಯಿತು. ಸತ್ಯಾಗ್ರಹಿಗಳನ್ನು ಉದ್ದೇಶಿಸಿ ದ.ಸಂ.ಸ. (ಸಂಯೋಜಕ) ಜಿಲ್ಲಾ ಮುಖಂಡ ನಾಗರಾಜ ಸಂಗಾಪುರ ಇವರು ಮಾತನಾಡುತ್ತಾ ಈ ಕಾರ್ಖಾನೆಗಳು ಕೇವಲ ಕೊಪ್ಪಳ ಜನರಿಗಷ್ಟೇ ಮಾಲಿನ್ಯ ಮಾಡಿಲ್ಲ. ತುಂಗಭದ್ರಾ ನದಿ ತಟ, ಜಲಾಶಯದ ಹಿನ್ನೀರ ಒಡಲಲ್ಲಿ ಸ್ಥಾಪನೆಯಾದ ಈ ಕಾರ್ಖಾನೆಗಳು ರೈತರು ಬಳಸಿಕೊಳ್ಳುವ ತುಂಗಭದ್ರಾ ನೀರನ್ನು ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಬಳಸಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 3 ಕೋಟಿ ಜನರ ನೀರಿನ ಹಕ್ಕು ಕಸಿದುಕೊಳ್ಳುತ್ತಿವೆ. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಇವರು ಏನು ಮಾಡುತ್ತಿದ್ದಾರೆ? ಇವರಿಗೆ ಇಷ್ಟೊಂದು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಇಲ್ಲವೆ? ಇವರಿಂದ ಗವಿಮಠದ ಸ್ವಾಮೀಜಿ ಹೇಳಿದ್ದಕ್ಕೆ ತಡೆ ಆದೇಶ ತರದಿದ್ದರೆ ಇವರೆಲ್ಲಾ ರಜೀನಾಮೆ ಕೊಡಲಿ ಎಂದು ಕಿಡಿಕಿಡಿಯಾದರು. ಇನ್ನೊಬ್ಬ ದಲಿತ ಮುಖಂಡ ಪ್ರಕಾಶ ಎಚ್. ಹೊಳೆಯಪ್ಪನವರ ಇಲ್ಲಿ ವಿಸ್ತರಣೆಗೆ ಮುಂದಾಗಿರುವ ಬಲ್ಡೋಟ ಅವಳಿ ನಗರದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಃಷ್ಪರಿಣಾಮ ಉಂಟು ಮಾಡುತ್ತದೆ. ಈ ವಿಸ್ತರಣೆಯನ್ನು ಒಕ್ಕೊರಲಿನಿಂದ ವಿರೋಧಿಸಿ ಫೆ.24ರಂದು ಕೊಪ್ಪಳ ಬಂದ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಸರಕಾರ ಹಗುರವಾಗಿ ಪರಿಗಣಿಸಿದರೆ ಜನ ಬೀದಿಗಿಳಿದು ಜನಪ್ರತಿನಿದಿನಗಳ ಮನೆ ಮುತ್ತಿಗೆ ಹಾಕುವ ಕಾಲ ದೂಲವಿಲ್ಲ ಎಂದರು. ಧರಣಿಯಲ್ಲಿ ಕೆ.ಎಂ.ಆರ್.ವಿ. ಜಿಲ್ಲಾಧ್ಯಕ್ಷ ಮುದಕಪ್ಪ ಎಂ. ಹೊಸಮನಿ, ಸಂಯೋಜಕ ಸಮಿತಿ ಜಿಲ್ಲಾಧ್ಯಕ್ಷ ರಾಮಪ್ಪ ಎಂ. ಗುಡ್ಲಾನೂರು, ನಿಂಗಪ್ಪ ಜಿ.ಎಸ್. ಬೆಣಕಲ್, ಎಂ.ಕೆ.ಸಾಹೇಬ ಮಾತನಾಡಿದರು. ಧರಣಿ ನೇತೃತ್ವವನ್ನು ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಖಬೂಲ್ ರಾಯಚೂರು, ಬಸವರಾಜ ನರೇಗಲ್, ಮಹಾದೇವಪ್ಪ ಎಸ್.ಮಾವಿನಮಡು, ಸುಂಕಪ್ಪ ಮೀಸಿ ವಹಿಸಿದ್ದರು. ಧರಣಿಯಲ್ಲಿ ಎಂ.ಮಾರುತಿ, ಗಾಳೆಪ್ಪ ಪೂಜಾರ, ಚನ್ನವೀರಯ್ಯ ಹಿರೇಮಠ, ಫಕೀರಪ್ಪ ದೊಡ್ಡಮನಿ, ಸುರೇಶ ಪೂಜಾರ, ಸಿದ್ದಪ್ಪ ಬೇಳೂರು, ಮಾರುತಿ ಪೂಜಾರ, ಫಾಸ್ಟರ್ ಚನ್ನಬಸಪ್ಪ ಅಪ್ಪಣ್ಣವರ, ಶಿವು ಹತ್ತಿಕಟಿಗಿ, ಬಸವರಾಜ ಶೀಲವಂತರ, ಶಿವಪ್ಪ ಹಡಪದ, ಶರಣಬಸಪ್ಪ ದಾನಕೈ, ಅಮರೇಶ ಕರಡಿ, ಫಕ್ರುಸಾಬ ಹೊಸಕೇರಿ, ಕೆಂಚಪ್ಪ ವೀರಾಪುರ, ಸುರೇಶ ಹಿಟ್ನಾಳ, ಶಿವಪ್ರಸಾದ ಆರ್. ರಾಮಸ್ವರೂಪ ಕೆ. ನಾಗರಾಜ ಕೆ.ಎಂ. ತಿಮ್ಮಣ್ಣ ಭೋವಿ,,ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

9 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

10 hours ago