If something goes well, it’s the government’s achievement, if it goes badly, it’s the failure of the officials, blames the Magalmanis
ಗಂಗಾವತಿ -ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಯಶಸ್ವಿಯಾದರೆ ಸರಕಾರ ತಮ್ಮ ಸಾಧನೆ ಎಂದು ಸಮರ್ಥಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಆದರೆ ಅವಘಡ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನ ಮಾಡುವ ಸರಕಾರ ಸರ್ವಾಧಿಕಾರ ಮನೋಭಾವನೆಯಿಂದ ಕೂಡಿದೆ ಎಂದು ಮ್ಯಾಗಳಮನಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. RCB ಇದು ಖಾಸಗಿ ಸಂಸ್ಥೆಯಾಗಿದ್ದು, ಬೆಟ್ಟಿಂಗ್ ನಂಥ ಕಾನೂನು ಭಾಹಿರ ಚಟುವಟಿಕೆ ನಡೆಸುತ್ತಿದ್ದು,ಕ್ರಿಕೆಟ್ ಆಟಗಾರರನ್ನು ಹಣಕ್ಕಾಗಿ ಖರೀದಿಸಿ ಪಂದ್ಯಾಟದಲ್ಲಿ ಭಾಗಿಯಾಗುತ್ತಾರೆ. ಇದರಿಂದ ಸಾಕಷ್ಟು ದುಡ್ಡು ಮಾಡುತ್ತಾರೆ. RCB ತಂಡದಲ್ಲಿ ಕೇವಲ ಕರ್ನಾಟಕದ ಆಟಗಾರರು ಮಾತ್ರ ಇರುವುದಿಲ್ಲ. ದೇಶ ವಿದೇಶಿ ಆಟಗಾರರು ಇರುತ್ತಾರೆ. ಅಲ್ಲದೇ ಇವರಿಂದ ಸರ್ಕಾರಕ್ಕೆ ಲಾಭ ಇರುವುದಿಲ್ಲವಾದರೂ ತಾರಾತುರಿಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿರುವದು ಯಾವ ಪುರುಷಾರ್ಥಕ್ಕಾಗಿ?. ಕರ್ನಾಟಕ ತಂಡ ರಣಜಿ ಟ್ರೊಫಿಯಲ್ಲಿ ಎಂಟು ಬಾರಿ ಗೆಲುವು ಕಂಡರೂ ಯಾವುದೇ ಕಾರ್ಯಕ್ರಮ ಮಾಡದೇ ಇರುವದು ದೌರ್ಬಾಗ್ಯ, ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಕ್ರೀಡಾ ಸಚಿವರು ಇಲ್ವಾ, ಬೆಂಗಳೂರಿನಲ್ಲಿ 11 ಜನರ ಸಾವಿನ ಪ್ರಕರಣದಲ್ಲಿ ಇವರ ಪಾತ್ರ ಇಲ್ಲವೇ? ತಾರಾತುರಿಯಲ್ಲಿ ಕಾರ್ಯಕ್ರಮ ಮಾಡಿರುವ ಸರಕಾರ ಪೊಲೀಸ್ ಅಧಿಕಾರಿಗಳ ಮೇಲೆ ತಪ್ಪು ಹೊರಿಸಿ ಅವರ ಮೇಲೆ ಕ್ರಮಕೈಗೊಂಡಿದ್ದು ಅಕ್ಷಮ್ಯ ಅಪರಾಧ ಹಾಗೂ ಪೊಲೀಸರ ಆತ್ಮಸ್ಥರ್ಯ ಕುಗ್ಗಿಸುವ ಪ್ರಯತ್ನ ಇದಾಗಿದೆ. ಅಮಾನತ್ತು ಆದೇಶ ವಾಪಸ್ ಪಡೆದುಕೊಂಡು ಮರು ಆದೇಶ ನೀಡಬೇಕು. ಸರಕಾರವೇ ಇದರ ಹೊಣೆಯನ್ನು ಹೊರಬೇಕು. ಮೃತರರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬಾರದು. RCB, KSCA, DNA, ಸಂಸ್ಥೆಗಳಿಂದ ಮೃತರ ಕುಟುಂಬಗಳಿಗೆ ತಲಾ ಐವತ್ತು ಲಕ್ಷ ರೂಪಾಯಿ ನೀಡುವOತೆ.ಕ್ರಮ ಕೈಗೊಳ್ಳಬೇಕು ಹಾಗೂ RCB KSCA, DNA ಸಂಸ್ಥೆ ಗಳನ್ನು ಬ್ಯಾನ್ ಮಾಡಬೇಕು ಎಂದು ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ, ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್, ರಾಮಣ್ಣ ರುದ್ರಾಕ್ಷಿ, ಕೃಷ್ಣ ಮೆಟ್ರಿ,ಮಂಜುನಾಥ್,ಬಸವರಾಜ್ ನಾಯಕ, ಜಂಬಣ್ಣ, ಹಾಲಪ್ಪ, ಸೋಮು, ಮುತ್ತಣ್ಣ, ನರಸಪ್ಪ, ಚಿದಾನಂದ, ಹುಲ್ಲೇಶ್, ಕನಕಪ್ಪ, ರಮೇಶ್, ಹನುಮಂತ ಸಾಬೀರ್ ಹುಸೇನ್,. ಮತ್ತಿತರರು ಇದ್ದರು.
ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ Meeting on future plans from the educational patron ಧಾರವಾಡ :…
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…
Verdict in the murder case at the Taluwagera fair: 15 convicts sentenced to 7 years…
The ceremony of the 2025-26 class 10th students of Aaron Mirajkar School began with the…
2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…
Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…