ಭದ್ರಯನಹಳ್ಳಿ ಗ್ರಾಮದ ಪ್ರಾ ಕೃ ಪ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವರುದ್ರ ಮತ್ತು ಉಪಾಧ್ಯಕ್ಷರಾಗಿ ಎಸ್ ಆರ್ ರಂಗಸ್ವಾಮಿ ಆಯ್ಕೆಯಾದರು .

Shivarudra was elected as the president and S.R. Rangaswamy as the vice-president of the Prakripa Cooperative Society of Bhadrayanahalli village.

ವರದಿ: ಬಂಗಾರಪ್ಪ .ಸಿ

ಹನೂರು: ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಿವರುದ್ರ.(ಶಿವಣ್ಣ) . ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನ ಎಸ್ ಆರ್ ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಹನೂರು ತಾಲೂಕಿನ ಕೌದಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಭದ್ರಯ್ಯನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿಜೆಪಿ ಬೆಂಬಲಿತ ನಾಲ್ಕು , ಕಾಂಗ್ರೆಸ್ ಬೆಂಬಲಿತ ಮೂರು ಜೆಡಿಎಸ್ ಬೆಂಬಲಿತ ನಾಲ್ಕು ನಿರ್ದೇಶಕರು ಆಯ್ಕೆಯಾಗಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರುಗಳು ಪ್ರತಿದಿನ ರಾಜಕೀಯ ಕೆಸರಾಟದಲ್ಲಿ ತೊಡಗಿದ್ದರೆ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಮಾತ್ರ ಕಾಂಗ್ರೆಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿರುವುದಕ್ಕೆ ಎರಡು ಪಕ್ಷದ ಮುಖಂಡರುಗಳು ಪರಸ್ಪರ ಸನ್ಮಾನ ಮಾಡುವುದರ ಮೂಲಕ ಶುಭಕೋರಿದ್ದಾರೆ.
ಇದೇ ಸಮಯದಲ್ಲಿ ನಿರ್ದೇಶಕರುಗಳಾದ ಶ್ರೀರಂಗ ಶೆಟ್ಟಿ, ಎನ್ ನಟರಾಜು, ಧನಪಾಲ್ ವಿ, ತಿಮ್ಮಮ್ಮ, ಆರ್ ಪರಶಿವಮೂರ್ತಿ ಮುಖಂಡರುಗಳಾದ ಕುರಟ್ಟಿ ಹೊಸೂರು ಗ್ರಾಮದ ಬಸವಣ್ಣ, ಭದ್ರಯ್ಯನಹಳ್ಳಿ ಗ್ರಾಮದ ಮುಖಂಡರಾದ ಪ್ರಕಾಶ್, ಶಿವಣ್ಣ, ಅರಬಗೆರೆ ಗ್ರಾಮದ ನಾಗರಾಜು ಮುನಿಸಿದ್ದ, ಸಣ್ಣಕಾಳ ಶೆಟ್ಟಿ, ವೆಂಕಟರಾಜು, ಗೋವಿಂದೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Mallikarjun

Share
Published by
Mallikarjun

Recent Posts

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…

2 hours ago

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

22 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

22 hours ago