ಕಲ್ಯಾಣಸಿರಿ ವಿಶೇಷ

ಒಂದೇ ದಿನ ಹತ್ತಿದ 16ನೇ ವಾರ್ಡನ ಸಿಸಿಮೇಶ್ ಯೋಜನೆ ವಿದ್ಯುತ್ ದೀಪ,,,

CCMesh project electric lamp installed in 16th ward in one day

ಗುಣಮಟ್ಟ ಹೊಂದಿವಿಯೋ ಇಲ್ಲವೋ ದೇವರೇ ಬಲ್ಲ,,? ಸಾರ್ವಜನಿಕ ವಲಯದ ಮಾತು.

ಕುಕನೂರು : ಕೇಂದ್ರ ಸರ್ಕಾರದ 1ಕೋಟಿ 6 ಲಕ್ಷ ರೂ.ಗಳ ಸಿಸಿ ಮೆಶ್ ಯೋಜನೆಯ ವಿದ್ಯುತ್ ದೀಪಗಳ ಅಳವಡಿಕೆಗೆ ಇತ್ತೀಚಿಗೆ ಪಪಂ ಮುಂಬಾಗದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಅದರಂತೆ ವಾರ್ಡನ ಪ್ರತಿಯೊಂದು ಕಂಬಗಳಿಗೂ ಈ ವಿದ್ಯುತ್ ದೀಪ ಅಳವಡಿಸಲಾಯಿತು.

ಆದರೆ 16ನೇ ವಾರ್ಡ ಒಂದರ ವಿದ್ಯುತ್ ಕಂಬದಲ್ಲಿ ಶುಕ್ರವಾರ ಸಾಯಂಕಾಲ ಅಳವಡಿಸಿದ ನಂತರ ಶನಿವಾರ ಬೆಳಗಿನ 4 ಗಂಟೆಯವರೆಗೆ ಉರಿದ ವಿದ್ಯುತ್ ದೀಪ ಕೊನೆಯುಸಿರೆಳೆಯಿತು.

ಶನಿವಾರ ಸಾಯಂಕಾಲ 7ಗಂಟೆಯಾದರೂ ದೀಪ ಹತ್ತಲೇ ಇಲ್ಲಾ, ಈ ಕುರಿತು ವಾರ್ಡನ ಸದಸ್ಯರ ಗಮನಕ್ಕೆ ತಂದಿದ್ದರು ಶನಿವಾರವು ದೀಪ ಬೆಳಗಲೇ ಇಲ್ಲಾ.

ಈ ಕಂಬದ ವಿದ್ಯುತ್ ದೀಪಗಳು ಪಟ್ಟಣದ ಪ್ರತಿ ಒಂದು ವಾರ್ಡ್‌ನಲ್ಲಿ ಪ್ರತಿ ಒಂದು ಕಂಬಗಳಿಗೂ ಅಳವಡಿಸಲು, 1 ಕೋಟಿ 6 ಲಕ್ಷ ರೂ.ಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಇದು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಹೊಂದಿದ್ದು ಒಂದು ವೇಳೆ ವಿದ್ಯುತ್‌ ಬಲ್ಪಗಳು ಅನಾನುಕೊಲತೆಯಿಂದ ಸ್ಥಗಿತಗೊಂಡಲ್ಲಿ ಸ್ವಯಂಚಾಲಿತವಾಗಿ ಮಾಹಿತಿ ಒದಗಿಸುವ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಹೇಳಿದ್ದರು.

ಆದರೆ ಇದೇನಾ ಸ್ವಯಂ ಚಾಲಿತ ಮಾಹಿತಿ,,? ಮಾರನೇ ದಿನವಾದರೂ ಗಮನಕ್ಕಿಲ್ಲಾ, ಇವೇನು ಗುಣಮಟ್ಟ ಹೊಂದಿವೆಯೋ ಇಲ್ಲವೋ ಆ ಭಗವಂತನೇ ಬಲ್ಲಾ ಎಂದು ಸಾರ್ವಜನಿಕ ವಲಯದ ಮಾತುಗಳು ಕೇಳಿ ಬಂದವು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

16 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

16 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

17 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

17 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

17 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

17 hours ago