It was decided to celebrate the birth anniversary of Dr. B. R. Ambedkar and Babu Jagjivan Ram in a grand manner.
ವರದಿ: ಬಂಗಾರಪ್ಪ .ಸಿ.
ಹನೂರು : ದೇಶಕಂಡ ಅಪರೂಪದ ಗೌರವಾನ್ವಿತ ಮಹಾನ್ ವ್ಯಕ್ತಿಗಳಲ್ಲಿ ಇವರುಗಳು ಮೊದಲಿರುತ್ತಾರೆ ,ಅಂತಹವರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತದೆ ,ನಾವುಗಳು ಸಹ ಎಲ್ಲಾ ಸಮಾಜ ಜನಾಂಗವು ಸೇರಿ ಸಂಭ್ರಮದಿಂದ ಆಚರಿಸೋಣವೆಂದು ಶಾಸಕರಾದ ಎಂ ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಜಯಂತಿಯನ್ನು ಆಚರಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿನ ಅಧ್ಯಕ್ಷತೆಯಲ್ಲಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಪ್ರಪಂಚವೆ ತಿರುಗಿನೋಡುವಂತೆ ಭಾರತವನ್ನು ಹಲವಾರು ಕಾರ್ಯಗಳ ಮೂಲಕ ಮಾಡಿದ್ದಾರೆ ಇಂತಹ ಎರಡು ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಮ್ಮೆಲ್ಲರ ನಡುವೆ ಇಂತಹವರ ಜನ್ಮ ದಿನದಂದು ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕು, ಮಹಾನ್ ವ್ಯಕ್ತಿ ಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಾದ ಕರ್ತವ್ಯ ನಮ್ಮದಾಗಿದೆ, ಹಾಗಾಗಿ ಅತ್ಯಂತ ವಿಜೃಂಭಣೆ ಯಿಂದ ನಾವೆಲ್ಲರೂ ಸೇರಿ ಆಚರಣೆ ಮಾಡೋಣ ಎಂದರು.
ನಿಗದಿಯಾಗಿದ್ದ ದಿನಾಂಕವಾದ
ಏಪ್ರಿಲ್ 5 ರಂದು ಆಚರಣೆ ಮಾಡಬೇಕಿದ್ದ ಬಾಬು ಜಗಜೀವನ್ ರಾಮ್ ಸಮುದಾಯದ ಸದಸ್ಯರ ತೀರ್ಮಾನದಂತೆ ಇದೀಗ ಸಮಯ ತುಂಬಾ ಕಡಿಮೆ ಇದ್ದು ಬೇರೆ ದಿನಾಂಕ ನಿಗದಿ ಪಡಿಸಿ ಮುಂದಿನ ದಿನಾಂಕ ದಂದು ವಿಜೃಂಭಣೆ ಯಿಂದ ಆಚರಣೆ ಮಾಡಲು ತಿಳಿಸಲಾಯಿತು. ಸರ್ಕಾರಿ ದಿನಾಂಕದಂದು ಇಲಾಖೆಯ ನಿಯಮಾನುಸಾರ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಮಾಡಲು ತೀರ್ಮಾನ ಮಾಡೋಣ
ಉಳಿದಂತೆ ಅಂಬೇಡ್ಕರ್ ಜಯಂತಿಯನ್ನು ಏಪ್ರಿಲ್ 14 ರಂದೆ ಮಾಡಲು ಒಕ್ಕೊರಲಿನಿಂದ ತೀರ್ಮಾನಿಸಿ .ನಂತರ ಅದರಲ್ಲೂ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆ ಸಹ ಇರುತ್ತದೆ ಎಂದು ತೀರ್ಮಾನ ಕೈಗೊಳ್ಳಲಾಗಿದೆ…
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್,ಇಓ ಉಮೇಶ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್,ಸಮಾಜ ಕಲ್ಯಾಣಾಧಿಕಾರಿ ಕೇಶವ್ ಮೂರ್ತಿ, ಬಿಇಓ ಗುರುಲಿಂಗಯ್ಯ,ಆರಕ್ಷಕ ನಿರೀಕ್ಷಕರಾದ ಅನಂದ್ ಮೂರ್ತಿ,ಮುಖಂಡರುಗಳಾದ ಸಿದ್ದರಾಜು,ಬಸವರಾಜು,ಲಿಂಗರಾಜು,ರವಿಂದ್ರ, ಸಂಪತು ಕುಮಾರ್ ಮಹೇಶ್ ,ಪುಟ್ಟಸ್ವಾಮಿ,ಗೋವಿಂದ,ಸಿದ್ದಯ್ಯ,ವೆಂಕಟೇಶ್,ಮಹೇಶ್,ಸುದೇಶ್,ಸಂಪತ್ ಕುಮಾರ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು….
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…