ಕಲ್ಯಾಣಸಿರಿ ವಿಶೇಷ

ಸಂಪಾದಕ ರವೀಂದ್ರ ಭಟ್, ಡಾ. ಬಿ. ಶೈಲಶ್ರೀ ಸೇರಿದಂತೆ 14 ಗಣ್ಯರಿಗೆ ಸೇಂಟ್ ಪೌಲ್ಸ್ ರಾಷ್ಟ್ರೀಯ ಮೀಡಿಯಾ ಅವಾರ್ಡ್ ಪ್ರದಾನ

Editor Ravindra Bhat, Dr. B. Shailashree, and 14 others were presented with the St. Paul’s National Media Award


ಬೆಂಗಳೂರು: ಮಾ.15: ಶುಕ್ರವಾರ ಸಂಜೆ ನಡೆದ ಉನ್ನತ ಮಟ್ಟದ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಾಧನೆಗಳನ್ನು ಗೌರವಿಸುವ ಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್ (ಸ್ಪಿನ್ಮ್) 2025ರ ವಾರ್ಷಿಕ ಸಮಾರಂಭವು ನಗರದ ನಾಗಸಂದ್ರದಲ್ಲಿರುವ ಸೇಂಟ್ ಪೌಲ್ಸ್ ಆಡಿಟೋರಿಯಂನಲ್ಲಿ ವಿಜೃಂಭಣೆಯಿಂದ ನಡೆಯಿತು.

ಸೇಂಟ್ ಪೌಲ್ಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಂವಹನ ವಿಭಾಗ, ಕರ್ನಾಟಕ ಮೀಡಿಯಾ ಅಕಾಡೆಮಿ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ಮುದ್ರಿತ, ಡಿಜಿಟಲ್ ಪ್ರಸಾರ ಮತ್ತು ಕಾರ್ಪೊರೇಟ್ ಸಂವಹನ ಕ್ಷೇತ್ರಗಳಲ್ಲಿನ ಮೇರು ಸಾಧಕರಿಗೆ ಪುರಸ್ಕಾರ ನೀಡಲಾಯಿತು.

ಜಾಗತಿಕ ಮಾಧ್ಯಮ ಸಂಸ್ಥೆಯಾದ “ಸೊಸೈಟಿ ಆಫ್ ಸೇಂಟ್ ಪೌಲ್ಸ್” ಸಂಸ್ಥೆಯು 111 ವರ್ಷಗಳ ಪರಂಪರೆಯನ್ನು ಹೊಂದಿದ್ದು, ಪತ್ರಿಕೋದ್ಯಮದ ಶ್ರೇಷ್ಟತೆ, ನಿಷ್ಠೆ, ನೈತಿಕತೆ ಮತ್ತು ಸಮಾಜಮುಖಿ ಸೇವೆಗೆ ಈ ಪ್ರಶಸ್ತಿಗಳನ್ನು ನೀಡಿದೆ.

ಸ್ಪಿನ್ಮ್ 2025ರ ಪ್ರಶಸ್ತಿ ಪುರಸ್ಕೃತರ ಪಟ್ಟಿ: ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಶ್ರೇಷ್ಠತೆ, ಸಾರ್ವಜನಿಕ ಸಂಪರ್ಕದಲ್ಲಿ ನಾಯಕತ್ವಕ್ಕಾಗಿ ಪಿಆರ್ ಸಿಐನ ನಿವೃತ್ತ ಅಧ್ಯಕ್ಷ ಶ್ರೀ ಎಂ.ಬಿ. ಜಯರಾಮ್, ಮುದ್ರಣ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಯಲ್ಲಿ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರನ್ನು ಕನ್ನಡ ಪತ್ರಿಕೋದ್ಯಮಕ್ಕೆ ಅವರ ಸಮರ್ಪಣೆಗಾಗಿ ಹಾಗೂ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗೆ ಅಬ್ದುಸ್ಸಲಾಂ ಪುತ್ತಿಗೆ, ‘ವಾರ್ತಾ ಭಾರತಿ’ಯ ಪ್ರಧಾನ ಸಂಪಾದಕರು, ಡಿಜಿಟಲ್ ಮಾಧ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ ಇನ್ನು ವಿಜ್ಞಾನ ಸಂವಹನದಲ್ಲಿ ಶ್ರೇಷ್ಠತೆಗಾಗಿ ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ, ರಕ್ಷಣೆ, ಭೌಗೋಳಿಕ ರಾಜಕೀಯ ವಿಶ್ಲೇಷಣೆಯಲ್ಲಿ ಅವರ ಕೊಡುಗೆಗಳಿಗಾಗಿ ಹಾಗೆ ತನಿಖಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗೆ ಶ್ರೀಮತಿ ಬಾಲಾ ಚೌಹಾಣ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಅವರ ಪ್ರಭಾವಶಾಲಿ ತನಿಖಾ ವರದಿಗಳಿಗಾಗಿ ಮತ್ತು ಸಿಎಸ್‌ಆರ್ ಸಂವಹನದಲ್ಲಿ ಶ್ರೇಷ್ಠತೆಯಲ್ಲಿ ಅರವಿಂದ್ ಗೌಡ, ಟೆಕಿಯಾನ್ ಕಾರ್ಪ್ ಬೆಂಗಳೂರಿನ ಹಿರಿಯ ಸಂವಹನ ನಿರ್ದೇಶಕ, ಸಮಗ್ರ ಸಂವಹನ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಅವರ ಕೊಡುಗೆಗಳಿಗಾಗಿ ನೀಡಿದೆ.

ಹಾಗೆಯೇ ಅಪರಾಧ ಪತ್ರಿಕೋದ್ಯಮದಲ್ಲಿ ಟಿವಿ9 ಕರ್ನಾಟಕದ ಮುಖ್ಯ ವರದಿಗಾರ ಮತ್ತು ಬ್ಯೂರೋ ಮುಖ್ಯಸ್ಥರಾದ ಕಿರಣ್ ಎಚ್.ವಿ. ಅವರ ಪ್ರಭಾವಶಾಲಿ ಅಪರಾಧ ವರದಿಗಾಗಿ, ಪ್ರಸಾರ ಪತ್ರಿಕೋದ್ಯಮದಲ್ಲಿ ನ್ಯೂಸ್ ಫಸ್ಟ್ ಕನ್ನಡದ ಪ್ರಧಾನ ಸಂಪಾದಕ ಮಾರುತಿ ಎಸ್.ಎಚ್., ಕೃತಕ ಬುದ್ಧಿಮತ್ತೆ ಆಧಾರಿತ ಸುದ್ದಿ ನಿರೂಪಣೆಯಲ್ಲಿನ ಸೇವೆಗಾಗಿ ನಂತರ ರೇಡಿಯೋ ಸಂವಹನದಲ್ಲಿ ಪಿ.ಡಿ. ಸತೀಶ್ ಚಂದ್ರ, ರೇಡಿಯೋ ಮಿರ್ಚಿ 98.3 ಎಫ್‌ಎಂ ಬೆಂಗಳೂರಿನ ಪ್ರೋಗ್ರಾಮಿಂಗ್ ಮುಖ್ಯಸ್ಥ, ರೇಡಿಯೋ ಸಂವಹನ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಬಹುಮುಖ್ಯವಾಗಿ ಮಾಧ್ಯಮ ಶಿಕ್ಷಣದಲ್ಲಿ ಶ್ರೇಷ್ಠತೆಯಲ್ಲಿ ಬೆಂಗಳೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗೆ, ಪಾಡ್‌ಕ್ಯಾಸ್ಟಿಂಗ್‌ನಲ್ಲಿ ರಶ್ಮಿ ರಾವ್, ಆರ್‌ಜೆ ಬಿಗ್ 92.7 ಎಫ್‌ಎಂ, ಬೆಂಗಳೂರು, ಆರ್‌ಆರ್ ಪ್ರೊಡಕ್ಷನ್ಸ್‌ನ ಸಂಸ್ಥಾಪಕಿ, ತಂತ್ರಜ್ಞಾನ ಮತ್ತು ಮನರಂಜನೆಯಿಂದ ಸಾಮಾಜಿಕ ಸಮಸ್ಯೆಗಳವರೆಗೆ ಒಳನೋಟವುಳ್ಳ ಸಂದರ್ಶನಗಳು ಮತ್ತು ಚರ್ಚೆಗಳ ಮೂಲಕ ಕೇಳುಗರನ್ನು ತೊಡಗಿಸಿಕೊಳ್ಳುವುದಕ್ಕಾಗಿ, ಬಾಹ್ಯಾಕಾಶ ಮತ್ತು ರಕ್ಷಣಾ ಪತ್ರಿಕೋದ್ಯಮದಲ್ಲಿ ಚೇತನ್ ಕುಮಾರ್, ದಿ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಸಹಾಯಕ ಸಂಪಾದಕ, ಭಾರತದ ಬಾಹ್ಯಾಕಾಶ, ರಕ್ಷಣಾ ಮತ್ತು ವಿಜ್ಞಾನ ಕ್ಷೇತ್ರಗಳ ಕುರಿತು, ಜೀವನ ಶೈಲಿ ಮತ್ತು ಮನರಂಜನಾ ಪತ್ರಿಕೋದ್ಯಮದಲ್ಲಿ ಶ್ರೀದೇವಿ ಅಯ್ಯಂಗಾರ್, ಬೆಂಗಳೂರು ಟೈಮ್ಸ್‌ನ ವರದಿಗಾರ್ತಿ, ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಎರಡಕ್ಕೂ ಜೀವನಶೈಲಿ ಮತ್ತು ಮನರಂಜನಾ ಬೀಟ್‌ಗಳಲ್ಲಿ ಕಥೆಗಳನ್ನು ರಚಿಸುವುದು, ಬರೆಯುವುದು, ಸಂಪಾದಿಸುವುದು ನಂತರದಲ್ಲಿ ಆರೋಗ್ಯ ಸಂವಹನದಲ್ಲಿ ಸುನಿತಾ ರಾವ್, ಹ್ಯಾಪಿಯೆಸ್ಟ್ ಹೆಲ್ತ್‌ನ ಹಿರಿಯ ಸಂಪಾದಕ, ಪ್ರಮುಖ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ವರದಿಗಾಗಿ ಎಲ್ಲ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಅಂತರ ಕಾಲೇಜು ಮಾಧ್ಯಮ ಉತ್ಸವವಾದ ಮೀಡಿಯಾ ಬ್ಯಾಷ್ 2025, ಸೇಂಟ್ ಪೌಲ್ಸ್ ಕಾಲೇಜಿನಲ್ಲಿ ನಡೆಯಿತು. ಮೀಡಿಯಾ ಬ್ಯಾಷ್‌ನಲ್ಲಿ ಸಾರ್ವಜನಿಕ ಸಂಪರ್ಕ, ಲೈವ್ ಫೀಲ್ಡ್ ರಿಪೋರ್ಟಿಂಗ್, ಛಾಯಾಗ್ರಹಣ, ರೀಲ್ ತಯಾರಿಕೆ, ಗುಂಪು ನೃತ್ಯ, ಫ್ಯಾಷನ್ ಶೋ ಮತ್ತು ಇತರ ಕಾರ್ಯಕ್ರಮಗಳು ನಡೆದವು.

ಸೋಸೈಟಿ ಆಫ್ ಸೇಂಟ್ ಪೌಲ್ಸ್ ಸಂಸ್ಥೆಯು ಪತ್ರಿಕೆ, ರೇಡಿಯೋ, ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ವರ್ಷದ ಸೇಂಟ್ ಪೌಲ್ಸ್ ರಾಷ್ಟ್ರೀಯ ಮೀಡಿಯಾ ಅವಾರ್ಡ್‌ಗಳು ಮಾಧ್ಯಮ ನೈತಿಕತೆ, ನವೀನತೆ ಮತ್ತು ಪ್ರಾಮಾಣಿಕತೆಗಾಗಿ ಹೊಸ ಆದರ್ಶವನ್ನು ಸ್ಥಾಪಿಸಿದವು.

ಫೋಟೋ ಸುದ್ದಿ: ಸೇಂಟ್ ಪಾಲ್ಸ್ ಕಾಲೇಜು ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರೀಶ್ ಲಿಂಗಣ್ಣ, ಎಸ್.ಎಚ್‌. ಮಾರುತಿ, ಬಿ. ಶೈಲಶ್ರೀ, ರಶ್ಮಿಆರ್. ರಾವ್, ಚೇತನ್ ಕುಮಾರ್, ಎಚ್.ವಿ. ಕಿರಣ್, ಬಾಲ ಚೌಹಾನ್, ಅರವಿಂದ್ ಗೌಡ, ಸುನೀತಾ ರಾವ್ ಮತ್ತು ರವೀಂದ್ರ ಭಟ್ಟ ಅವರಿಗೆ ‘ಸೇಂಟ್ ಪಾಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್-2025’ ಪ್ರದಾನ ಮಾಡಲಾಯಿತು. ಇದೇ ವೇಳೆ ಕೊಪ್ಪಳ ವಿವಿಯ ಕುಲಪತಿ ಪ್ರೊ.ಬಿ.ಕೆ. ರವಿ, ಆಯೇಷಾ ಖಾನುಂ, ಬಿ.ಆರ್. ಮಮತಾ, ಶೈಜು ಜೋಸೆಫ್, ಎಂ.ಜೆ. ಥಾಮಸ್, ವಿ. ಪ್ರಶಾಂತ್, ಮೃದುಲಾ ಎ. ಕುಲಕರ್ಣಿ, ವಿ. ಪ್ರಕಾಶ್, ತೃಪ್ತಿ ಶರ್ಮಾ,ವಿ. ಬಾಬು, ಎಂ ಶೈಲಜಾ ಹಾಗೂ ಎನ್.ಕೆ. ಅನನ್ಯ ಮತ್ತಿತರರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

7 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

7 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

7 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

7 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

7 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

7 hours ago