Sri Yoginareyana Jayanti was celebrated simply in Hanur
ವರದಿ : ಬಂಗಾರಪ್ಪ .ಸಿ.
ಹನೂರು : ಕಳೆದ ಸಮಯದಲ್ಲಿ ಸರ್ಕಾರದಿಂದ ಯಾವುದಾದರು ಸಂಘಕ್ಕೆ ಒಂದು ಕೊಟಿ ರೂ ಅನುದಾನ ಬಿಡುಗಡೆ ಮಾಡಿಸಿದ ಕೀರ್ತಿ ಇದ್ದರೆ ಅದು ನಮ್ಮ ಯೋಗಿನರೇಯೆಣ ಬಣಜಿಗ ಸಂಘವಾಗಿದೆ ಮಾಜಿ ಶಾಸಕರಾದ ಆರ್ ನರೇಂದ್ರ ಹಾಗೂ ಎಮ್ ಆರ್ ಸೀತರಾಮ್ ಹಾಗೊ ಆರ್ ದೃವನಾರಯಣ್ ರವರ ಅಧಿಕಾರದ ಅವಧಿಯಲ್ಲಿ ನಮಗೆ ನೀಡಿದ್ದಾರೆ ,ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ನಿರ್ವಹಿಸಿದೆ ಪಧಾದಿಕಾರಿಗಳು ಸ್ವಂತ ಇಚ್ಛೆಯಿಂದ ಸೇವೆ ಸಲ್ಲಿಸಿದ್ದಾರೆ ಅದ್ದರಿಂದ ನಮ್ಮ ಕಾರ್ಯವನ್ನು ನಿರ್ವಹಿಸುತ್ತೆವೆ . ಸಂಘದ ಸೇವೆಗೆ ಸದಾ ನಾವು ಸಿದ್ದ ಎಂದು ಹನೂರು ತಾಲ್ಲೂಕು ಶ್ರೀ ಯೋಗಿನರೇಯಣ ಬಣಿಜಿಗ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ನ ವಸತಿ ಗೃಹದಲ್ಲಿ ಮತನಾಡಿದ ಎಇಇ ರಂಗಸ್ವಾಮಿ ಯವರು ನಮ್ಮ ಜನಾಂಗದವರು ಇಂದು ಯೋಗಿ ನರೇಯಣ ಜಯಂತಿಯನ್ನು ಆಚರಿಸುವುದು ಸಂತೋಷದ ವಿಷಯ ಇವರಿಗೆ ನಾನು ಸದಾ ಚಿರರುಣಿಯಾಗಿರುತ್ತನೆ , ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಹೋರಾಟವು ಬಹುಮುಖ್ಯವಾಗಿದೆ, ನಮ್ಮ ಜನಾಂಗದ ಶಿಕ್ಷಣಕ್ಕೆ ಎರಡು ಎ ಪ್ರಮಾಣ ಪತ್ರ ಮಾಡಿಕೊಟ್ಟಿದ್ದಾರೆ . ಇದರಿಂದ ನಮಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ , ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಇಡಿ ರಾಜ್ಯದಲ್ಲಿ ಬಣಜಿಗ ಜನಾಂಗ ಹೆಚ್ಚಿದ್ದಾರೆ , ಮುಂದಿನ ದಿನಗಳಲ್ಲಿ ಜಯಂತಿಯನ್ನು ಅದ್ದೂರಿಯಾಗಿ ಮಾಡೋಣ ಮುಂದೆಯು ಮುಂದುವರಿಸುತ್ತ ಹೊಗುಬೇಕು ನಮ್ಮಲ್ಲಿರುವವರಿಗೆ ಸಮಾಜ ಸೇವೆ ಮಾಡಲು ಅವಕಾಶವನ್ನು ಮಾಡಿಕೊಟ್ಟರೆ ಸಹಾಯವಾಗುತ್ತದೆ . ಒಬ್ಬ ವಿದ್ಯಾರ್ಥಿ ಶುಲ್ಕವನ್ನು ಭರಿಸಲು ನಾನು ಸಹಾಯ ಮಾಡಿದರ ಪರಿಣಾಮವಾಗಿ ಇಂದು ಅವನ ವಿದ್ಯಾಭ್ಯಾಸವನ್ನು ಮುಂದುವರಿಲಾಗಿದೆ . ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಮುಂದಾಗಬೇಕು ನಮ್ಮವರು ಎಂಬ ಮನೋಭಾವ ಬೆಳೆಸುಕೊಳ್ಳಬೇಕು ಎಂದರು . ನಮಗೆ ಹಿತ ಬಯಸುವವರಿಗೆ ಚುನಾವಣೆಯಲ್ಲಿ ಜನಾಂಗದ ಒಗ್ಗಟ್ಟು ಪ್ರದರ್ಶನವನ್ನು ಮಾಡಬೇಕು ,ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಬೇಕು ಎಂದರು.
ಶಿಕ್ಷಕರಾದ ಮಹೇಶ್ ಮಾತನಾಡಿ ನಮ್ಮ ಜನಾಂಗದವರಿಗೆ ಶಿಕ್ಷಣ ಇಲಾಖೆಯಲ್ಲಿ ಜನಾಂಗದ ಜಾತಿ ಪ್ರಮಾಣಪತ್ರವನ್ನು ಬದಲಾವಣೆ ಮಾಡಬೇಕಾಗಿದೆ ಹಲವಾರು ನ್ಯೂನತೆಗಳಿವೆ ಇದರಿಂದ ಸರ್ಕಾರದಿಂದ ಪಡೆಯುವ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗಿದೆ, ಗ್ರಾಮಗಳಲ್ಲಿ ಸರಿಯಾದ ವಿಳಾಸ ನೀಡಿ ತಂದೆ ತಾಯಿಯಾದವರು ಜನನ ಪ್ರಮಾಣ ಪತ್ರವನ್ನು ಪಡೆದು ವಿದ್ಯಾಭ್ಯಾಸ ಮಾಡಬೇಕಾಗಿದೆ ,ನಮ್ಮಲ್ಲಿ ಗೌಡ ಬಣಜಿಗ ,ಶೆಟ್ಟಿ ಬಣಜಿಗ ,ಬಳೆ ಬಣಜಿಗ ಈಗೆ ಹಲವಾರು ಪಂಗಡಗಳಿದ್ದು ಎಲ್ಲಾವು ಒಂದೆ ಜಾತಿಯಾಗಿದೆ . ಜನಾಂಗದ ಕೆಲವರು ತಾಳ್ಮೆಯಿಂದ ಇದ್ದಷ್ಟು ನಮಗೆ ಒಗ್ಗಟ್ಟು ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರರಾದ ವೈ ಕೆ ಗುರುಪ್ರಸಾದ್ , ಆರ್ ಐ ಶೇಷಣ್ಣ , ಸಂಘದ ಉಪಾಧ್ಯಕ್ಷರಾದ ಜೈರಾಮ್ ,ಕಾರ್ಯದರ್ಶಿ ರಂಗಶೇಟ್ಟಿ ,ಖಜಾಂಚಿ ಶ್ರೀರಂಗಶೇಟ್ರು .ಉಪಾಕಾರ್ಯದರ್ಶಿ ಬಸವರಾಜು . ಸಂಘಟನೆ ಕಾರ್ಯದರ್ಶಿ ಪ್ರಕಾಶ್ . ಸದಸ್ಯರುಗಳಾದ ಚಂದ್ರು .ಮಾದೇಶ್ ,ಬಾಲು ,ಗೋವಿಂದು ,ನಾಗೇಶ್ ,ಪಟ್ಟಣ ಪಂಚಾಯತಿ ಸದಸ್ಯರು ಪವಿತ್ರ ಪ್ರಸನ್ನ ಕುಮಾರ್ . ಮುಖಾಡರುಗಳಾದ ನಾಗರಾಜು .ಶಿವಕುಮಾರ್ . ನಾಗರಾಜು .ಮುನಿಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…