ಕಲ್ಯಾಣಸಿರಿ ವಿಶೇಷ

ಮಂಗಳಗಿರಿ ನರಸಿಂಹಸ್ವಾಮಿ ದೇಗುಲಕ್ಕೆ ಹೈಟೆಕ್ ಬಸ್‌ಗಳ ಕೊಡುಗೆ

High-tech buses donated to Mangalagiri Narasimhaswamy Temple

ಹೈದರಾಬಾದ್: ನೆರೆಯ ಆಂಧ್ರಪ್ರದೇಶದ ಪುರಾತನ ಪ್ರಸಿದ್ಧ ಮಂಗಳಗಿರಿ ಶ್ರೀ ಲಕ್ಷಿö್ಮÃ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಎಂಇಐಎಲ್ ಫೌಂಡೇಶನ್ ನಿಂದ ಮಂಗಳಗಿರಿಯ ಏಮ್ಸ್ ಮತ್ತು ದೇಗುಲಕ್ಕೆ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಗಳನ್ನು ಕೊಡುಗೆ ನೀಡಲಾಗಿದೆ.

ಸ್ವಚ್ಛ ಮತ್ತು ಹಸಿರು ಭವಿಷ್ಯಕ್ಕಾಗಿ ಬಲವಾದ ಬದ್ಧತೆಯೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೇಘಾ ಎಂಜಿನಿಯರಿAಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸಿಎಸ್‌ಆರ್ ವಿಭಾಗವಾದ ಎಂಇಐಎಲ್ ಫೌಂಡೇಶನ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ ಆರ್) ಉಪಕ್ರಮದ ಭಾಗವಾಗಿ ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿರುವ ಏಮ್ಸ್ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಎರಡು ಅತ್ಯಾಧುನಿಕ ಒಲೆಕ್ಟ್ರಾ ೭ ಮೀಟರ್ ಎಲೆಕ್ಟ್ರಿಕ್ ಬಸ್‌ಗಳನ್ನು ಕೊಡುಗೆ ನೀಡಿದೆ.

ಈ ಪರಿಸರ ಸ್ನೇಹಿ ಬಸ್ಸುಗಳನ್ನು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ಅವರು ಆಂಧ್ರ ಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದರು.

ಏನಿದರ ವಿಶೇಷ?

ಈ ಸುಧಾರಿತ ಎಲೆಕ್ಟ್ರಿಕ್ ಬಸ್ಸುಗಳಲ್ಲಿನ ಪ್ರಯಾಣವನ್ನು ಆರಾಮದಾಯಕ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಮಾಡಲು ವಿನ್ಯಾಸಗೊಳಿಸಲಾಗಿದೆ. ಪ್ರತಿ ಬಸ್ ೧೮ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ೧೫೦ ಕಿ.ಮೀ ಚಲಿಸುತ್ತದೆ. ಹೆಚ್ಚಿನ ಸುರಕ್ಷತೆಗಾಗಿ ಡಿಜಿಟಲ್ ಇನ್ಸ್ ಸ್ಟ್ರುಮೆಂಟ್ ಪ್ಯಾನೆಲ್‌ಗಳು, ಎಲೆಕ್ಟ್ರಾನಿಕ್ ಹೈಡ್ರಾಲಿಕ್ ಪವರ್ ಸ್ಟೀರಿಂಗ್ (ಇಎಚ್ಪಿಎಸ್), ರಿಯಲ್-ಟೈಮ್ ವೆಹಿಕಲ್ ಟ್ರ‍್ಯಾಕಿಂಗ್ ಸಿಸ್ಟಮ್ಸ್ (ವಿಟಿಎಸ್) ಮತ್ತು ರಿವರ್ಸ್ ಪಾರ್ಕ್ ಅಸಿಸ್ಟ್ ಸಿಸ್ಟಮ್ಸ್ (ಆರ್‌ಪಿಎಎಸ್) ಗಳೊಂದಿಗೆ ಉನ್ನತೀಕರಿಸಲ್ಪಟ್ಟಿವೆ.

೧.೨೪ ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನ:

ಈ ಅತ್ಯಾಧುನಿಕ ಬಸ್‌ಗಳಲ್ಲಿ ಪ್ರಯಾಣಿಕರು ಆಹ್ಲಾದಕರ ಪ್ರಯಾಣಕ್ಕಾಗಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ಗಳು ಮತ್ತು ಹವಾನಿಯಂತ್ರಿತ ಒಳಾಂಗಣಗಳನ್ನು ಸಹ ಆನಂದಿಸಬಹುದಾಗಿದೆ. ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿರುವ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್, ಸ್ವಚ್ಛ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಗೆ ಭಾರತದ ಪರಿವರ್ತನೆಯ ಪ್ರಯಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಕಂಪನಿಯು ಈಗಾಗಲೇ ೨,೫೦೦ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು ವಿತರಿಸಿದೆ, ಇದು ೩೦ ಕೋಟಿ ಕಿಲೋಮೀಟರ್ ಗಿಂತ ಹೆಚ್ಚು ಕ್ರಮಿಸುವ ಮೂಲಕ ೨.೭ ಲಕ್ಷ ಟನ್ ಗಳ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ದಾಖಲೆ ನಿರ್ಮಿಸಿದ್ದು, ಇದು ೧.೨೪ ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ!

ಹರ್ಷ ವ್ಯಕ್ತಪಡಿಸಿದ ಕೆ.ವಿ.ಪ್ರದೀಪ್:

ಈ ಒಲೆಕ್ಟ್ರಾ ಇವಿ ಬಸ್‌ಗಳ ಸಂದರ್ಭದಲ್ಲಿ, ಕೆ.ವಿ.ಪ್ರದೀಪ್ ಅವರು ಸುಸ್ಥಿರತೆಗೆ ಒಲೆಕ್ಟ್ರಾದ ಬದ್ಧತೆಯನ್ನು ಪ್ರತಿಪಾದಿಸುತ್ತಾ, “ಈ ಸಿಎಸ್‌ರ್ ಉಪಕ್ರಮದ ಮೂಲಕ ಮಂಗಳಗಿರಿಯ ಏಮ್ಸ್ ಮತ್ತು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯವನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ. ಈ ಬಸ್ಸುಗಳು ಪರಿಣಾಮಕಾರಿ ಸಾರಿಗೆ ಪರಿಹಾರವನ್ನು ಒದಗಿಸುವುದಲ್ಲದೆ ಸ್ವಚ್ಛ, ಹಸಿರು ಆಂಧ್ರ ಪ್ರದೇಶವನ್ನು ರಚಿಸಲು ಸಹಾಯ ಮಾಡುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮತ್ತು ಭಾರತಕ್ಕೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಒಲೆಕ್ಟ್ರಾ ಸಮರ್ಪಿತವಾಗಿದೆ. ಈ ಉಪಕ್ರಮದೊಂದಿಗೆ, ಒಲೆಕ್ಟ್ರಾ ಮತ್ತು ಎಂಇಐಎಲ್ ಫೌಂಡೇಶನ್ ಸಾರಿಗೆಯು ಪರಿಣಾಮಕಾರಿ ಮಾತ್ರವಲ್ಲ, ನಮ್ಮ ಗ್ರಹಕ್ಕೆ ದಯೆ ತೋರಿಸುವ ಜಗತ್ತನ್ನು ರಚಿಸುವ ತಮ್ಮ ಧ್ಯೇಯವನ್ನು ಮುಂದುವರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯಿಂದಲೂ ಭಕ್ತರು: ಗುಂಟೂರು ಜಿಲ್ಲೆಯಲ್ಲಿರುವ ಮಂಗಳಗಿರಿ ಶ್ರೀನರಸಿಂಹಸ್ವಾಮಿ ಚರಿತ್ರಾರ್ಹ ದೇವಸ್ಥಾನಕ್ಕೆ ಬಳ್ಳಾರಿಯೂ ಸೇರಿದಂತೆ ಕರ್ನಾಟಕ-ಆಂಧ್ರಪ್ರದೇಶದ ಗಡಿಯಂಚಿನಲ್ಲಿರುವ ತುಮಕೂರು, ಚಿತ್ರದುರ್ಗ, ರಾಯಚೂರು ಜಿಲ್ಲೆಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಾರೆ. ಕಲ್ಯಾಣ ಕರ್ನಾಟಕದ ವಿಜಯನಗರ, ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಭಕ್ತರೂ ಮಂಗಳಗಿರಿಗೆ ತೆರಳುತ್ತಾರೆ. ಅಂತಹ ಭಕ್ತರು ಈ ಒಲೆಕ್ಟಾç ಇವಿ ಬಸ್ ಗಳ ಅನುಭೂತಿ ಸವಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದಿಂದಲೂ ಇಂತಹ ಬಸ್‌ಗಳನ್ನು ಸಂಚರಿಸಲು ಅವಕಾಶ ಮಾಡಿಕೊಡುವ ಇರಾದೆ ಸಂಸ್ಥೆ ಹೊಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

12 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

12 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

12 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

12 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

12 hours ago