Breaking News

ಸಂಶೋಧಕರು ನೈಸರ್ಗಿಕ, ಸಾವಯವ ಕೃಷಿಯ ಮೌಲ್ಯಮಾಪನ ಮಾಡಲಿ: ಕುಲಪತಿ ಡಾ.ಎಂ. ಹನುಮಂತಪ್ಪ

Let researchers evaluate natural, organic farming: Chancellor Dr.M. Hanumanthappa

ಜಾಹೀರಾತು
ಜಾಹೀರಾತು

ರಾಯಚೂರು ಫೆ 17, (ಕರ್ನಾಟಕ ವಾರ್ತೆ): ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಎಲ್ಲಿ ಅಳವಡಿಸಬೇಕು ಎಂಬುದನ್ನು ಸಂಶೋಧಕರು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕು. ಅಲ್ಲದೆ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಸಾರ್ವಜನಿಕರಿಗೆ ತಿಳಿಹೇಳಬೇಕೆಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಹೇಳಿದರು.
ಫೆ.17ರ ಸೋಮವಾರ ದಂದು ನಗರದ ಕೃಷಿ ವಿವಿಯ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನವದೆಹಲಿ ಪ್ರಾಯೋಜಿತ ಚಳಿಗಾಲದ ಸುಸ್ಥಿರ ಮಣ್ಣಿನ ಆರೋಗ್ಯ ಮತ್ತು ಜೀವನೋಪಾಯದ ಭದ್ರತೆಗಾಗಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ತಾಂತ್ರಿಕ ಸಾಧನೆ, ಸಂಶೋಧನಾ ಆದ್ಯತೆ ಮತ್ತು ಭವಿಷ್ಯದ ಕಾರ್ಯತಂತ್ರಗಳು ಕುರಿತು ಫೆ.17ರಿಂದ ಮಾರ್ಚ್ 09ರವರೆಗೆ ನಡೆಯುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತೀವ್ರವಾದ ಏಕಬೆಳೆ ಕೃಷಿಯಿಂದಾಗಿ ಮಣ್ಣಿನ ಫಲವತ್ತತೆ ಕುಸಿತ ಮತ್ತು ಜೀವವೈವಿಧ್ಯ ನಷ್ಟದಿಂದ ಉಂಟಾಗುವ ಸವಾಲುಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಭಾರತಾದ್ಯಂತ ಸಾವಯವ ಇಂಗಾಲದ ಮಟ್ಟವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಮಣ್ಣಿನ ಫಲವತ್ತತೆಯನ್ನು ಪುನಃ ಸ್ಥಾಪಿಸಲು ಬೆಳೆ ಪರಿವರ್ತನೆ ಮತ್ತು ಸಾವಯವ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಗುಜರಾತ್ ಮಾದರಿ ಮತ್ತು ಇ-ಶಾಪ್ ತಂತ್ರಜ್ಞಾನದಂತಹ ಸುಧಾರಿತ ಮಣ್ಣಿನ ಪರೀಕ್ಷಾ ತಂತ್ರಜ್ಞಾನಗಳ ಪಾತ್ರದ ಬಗ್ಗೆ ಅವರು ಒತ್ತಿ ಹೇಳಿದರು.
ವಿಶ್ವವಿದ್ಯಾನಿಲಯದ ಐಸಿಎಆರ್ ಮೂರು ಚಳಿಗಾಲದ ಕೋರ್ಸ್ಗಳಿಗೆ ಮಂಜೂರಾತಿ ನೀಡಿದೆ. ಅವುಗಳಲ್ಲಿ ಒಂದು ಈಗಾಗಲೇ ಕೀಟನಾಶಕ ಶೇಷ ನಿರ್ವಹಣೆ ಮತ್ತು ಗುಣಮಟ್ಟ ವಿಶ್ಲೇಷಣೆಯ ಕುರಿತು ಪೂರ್ಣಗೊಂಡಿದೆ. ಉಳಿದ ಎರಡು ಕೊಯ್ಲು ನಂತರದ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣೆಯ ಮೇಲೆ ಕೇಂದ್ರೀಕೃತವಾಗಿವೆ. ಇದು ಕೃಷಿ ಸಂಶೋಧನೆಯನ್ನು ಮುನ್ನಡೆಸುವ ಸಂಸ್ಥೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಸುಸ್ಥಿರ ಕೃಷಿಯ ಕುರಿತು ಸಮಗ್ರ ಚರ್ಚೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರ ಉಪನ್ಯಾಸಗಳನ್ನು ಬಹಳ ಜಾಗರೂಕತೆಯಿಂದ ಆಯೋಜನೆ ಮಾಡಬೇಕೆಂದರು.
ತೀವ್ರ ಕೃಷಿ ಪದ್ಧತಿಯ ಕಾರಣದಿಂದಾಗಿ ಮಣ್ಣಿನ ಸಾರ್ವತ್ರಿಕ ಫಲವತ್ತತೆ ಮತ್ತು ಜೈವಿಕ ಕಾರ್ಬನ್ ಅಂಶದ ಪ್ರಮಾಣ ಕಡಿಮೆಯಾಗುತ್ತಿದೆ. ಒಂದೇ ಬೆಳೆ ಸತತ ಬೆಳೆಸುವ ಪದ್ಧತಿ ಹೆಚ್ಚುತ್ತಿದೆ. ನಾವು ಮಣ್ಣಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಗಳನ್ನು ಸಮತೋಲನದಲ್ಲಿರಿಸುವ ಮಾರ್ಗಗಳನ್ನು ಅನ್ವೇಷಿಸಬೇಕಾಗಿದೆ. ಅಲ್ಲದೆ ಮಣ್ಣಿನ ಪೋಷಕಾಂಶ ಕೊರತೆಗಳನ್ನು ತಕ್ಷಣ ನಿಗಿಸಬೇಕು. ಶ್ರೀಲಂಕಾದ ನೈಸರ್ಗಿಕ ಕೃಷಿ ಅನುಭವವನ್ನು ಆಧರಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
21 ದಿನಗಳ ಕಾಲ ಕಾರ್ಯಾಗಾರ: ಫೆ.17ರಿಂದ ಮಾರ್ಚ್ 09ರವರೆಗೆ ಸುಮಾರು 21ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಸಾವಯವ ಕೃಷಿ, ಮಣ್ಣಿನ ಆರೋಗ್ಯ, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ವಿಚಾರಗಳು ಚರ್ಚೆ ನಡೆಯಲಿವೆ. ಈ ಕಾರ್ಯಾಗಾರದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ಕೃಷಿ ವಿಜ್ಞಾನಿಗಳು ತಮ್ಮ ವಿಚಾರ ಮಂಡಿಸಲಿದ್ದಾರೆ.

About Mallikarjun

Check Also

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ವತಿಯಿಂದ ರೈತರಿಗೆ ತರಬೇತಿ ಕಾರ್ಯಕ್ರಮ.

Training program for farmers by JSB Foundation, Kollegala. ವರದಿ : ಬಂಗಾರಪ್ಪ .ಸಿ.ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.