ಕಲ್ಯಾಣಸಿರಿ ವಿಶೇಷ

ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ

Ambigar Choudaiah is a hardline surrenderer


ಗಂಗಾವತಿ: ಪ್ರಾಪಂಚಿಕ ಡಂಬಾರಚಾರಗಳನ್ನು ಕಟುವಾಗಿ ಖಂಡಿಸುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ ಎಂದು
ನಗರ ಘಟಕ ಅಧ್ಯಕ್ಷ ಹನುಮೇಶ್ ಕುರುಬರು ಹೇಳಿದರು.
ಅವರು ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಸಾಮಾನ್ಯ ಜನರಲ್ಲಿದ್ದ ಮೇಲು ಕೀಳು ಮುಂತಾದ ವಿಷಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಶರಣ, ಜಗತ್ತಿನ ಅಂಕುಡೊAಕು ತಮ್ಮದೇ ಆದ ಕಟು ಶಬ್ದಗಳು, ಟೀಕಾ ವಚನಗಳ ಮೂಲಕ ತಿದ್ದುತ್ತಿದ್ದರು. ಬಸವಣ್ಣ ನ ಕಾಲದ ಶರಣರಲ್ಲೇ ಅತಿ ನಿಷ್ಟೂರ ಮತ್ತು ನೇರ ನೆಡೆನುಡಿಯ ಉಗ್ರ ಶರಣ ಎನ್ನಬಹುದು ಎಂದರು.
೧೨ ನೇ ಶತಮಾನದಲ್ಲಿದ್ದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿಲ್ಲ, ಈಗಿನ ಸಮಾಜಕ್ಕೆ ದಾರಿ ತೋರಿಸಲು ಮತ್ತೆ ನಿಜ ಶರಣರಂಥ ಶರಣರ ಅಗತ್ಯವಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಸುನಿಲ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಗಡ್ಡಿ, ಕುಷ್ಟಗಿ ನಗರ ಘಟಕ ಉಪಾಧ್ಯಕ್ಷ ಮುತ್ತುರಾಜ್. ಗೌರವಾಧ್ಯಕ್ಷ ಹುಲಿಯಪ್ಪ ಅರೇಗಾರ್, ಯುವ ಘಟಕ ಉಪಾಧ್ಯಕ್ಷರು ಮಾರುತಿ, ಉಪಾಧ್ಯಕ್ಷರು ಕೊಟ್ರೇಶ್ ಕುಂಬಾರ್, ಆಟೋ ಚಾಲಕರು ಅಧ್ಯಕ್ಷರು ಎಲ್ಲಪ್ಪ. ತಾಲೂಕ ಆಟೋ ಚಾಲಕರ ಉಪಾಧ್ಯಕ್ಷ ಹಾಗು ತಾಲೂಕ ಆಟೋ ಚಾಲಕರ ಕಾರ್ಯದರ್ಶಿ ಗಿಡ್ಡಪ್ಪ ಪರಸುರಾಮ್ ಇತರರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

12 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

12 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

12 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

12 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

12 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

12 hours ago