Pilgrimage to Yadagiri Mylapore Temple by Shree Seven Crore Malaya Devotees
ಯಲಬುರ್ಗಾ : ಪಟ್ಟಣದ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಿಂದ ಯಾದಗಿರಿಯ ಮೈಲಾಪೂರ ದೇವಸ್ಥಾನ ಕ್ಕೆ ಕಾಲುನಡಗೆಯಿಂದ ,ಭಕ್ತರು ಪಾದಯಾತ್ರೆ ಅಂಗವಾಗಿ ವಿವಿಧ ಮಾರ್ಗವಾಗಿ ಪಾದಯಾತ್ರೆ ಮೂಲಕ ಪ್ರಯಾಣ ಬೆಳಿಸಿದರು. ಈ ವೇಳೆ ಯಲಬುರ್ಗಾ, ಮುಧೋಳ , ಮಾರನಾಳ, ಗೊರಳ್ಳಿ, ವೀರಾಪುರ, ಹನುಮಪೂರ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಭಕ್ತರು ಸೇರಿಕೊಂಡು ಪ್ರತಿವರ್ಷದಂತೆ ,
ಈ ವರ್ಷವು 20ನೇ ವರ್ಷದ ಪಾದಯಾತ್ರೆ ಪ್ರಾರಂಭಗೊಂಡು ಶ್ರೀ ಬಸವಲಿಂಗೇಶ್ವರ ಸ್ವಾಮಿ ಗದ್ದಿಗೆ , ಶ್ರೀ ಎಲ್ಲಮ್ಮ ದೇವಿ ದೇವಸ್ಥಾನ , ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಶ್ರೀ ದುರ್ಗಾದೇವಿ ದೇವಸ್ಥಾನ, ಅಂಬೇಡ್ಕರ ವೃತ್ತ, ಶ್ರೀ ಭಕ್ತ ಕನಕದಾಸ ವೃತ್ತ, ವಿವಿಧ ಮಾರ್ಗಾವಾಗಿ ಸಕಲ ಮಂಗಳ ವಾದ್ಯದೊಂದಿಗೆ ಭಕ್ತರು ಪಾದಯಾತ್ರೆ ಪ್ರಾರಂಬಿಸಿದರು. ಈ ಸಮಯದಲ್ಲಿ ಸಮಿತಿಯ ಭಕ್ತರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಮಲ್ಲಿಕಾರ್ಜನಗೌಡ ಪೋ.ಪಾಟೀಲ, , ಫಕೀರಪ್ಪ ಗಾಣಗೇರ, ಶಿದ್ರಾಮಗೌಡ ಮಾಲಿ ಪಾಟೀಲ, ಅರ್ಚಕ ಚನ್ನಬಸಯ್ಯ ಅರಕೇರಿಮಠ, ನಾಗಪ್ಪ ಇಟಗಿ, ಶಿವಪುತ್ರಪ್ಪ ಕೊಪ್ಪಳ, ರಾಮಣ್ಣ ನೇರೆಗಲ್ಲ, ತಿಪ್ಪಣ್ಣ ಉಪ್ಪಾರ, ಮಹಾದೇವಪ್ಪ ಹಡಪದ, ಮಲ್ಲಿಕಾರ್ಜುನ ಸಾದರಖಾನ, ಶ್ರೀಶೈಲಪ್ಪ ಬನ್ನಿಕೊಪ್ಪ, ನಾಗರಾಜ ದಿವಟರ ಸೇರಿದಂತೆ ಸಕಲ ಭಕ್ತರು ಭಾಗವಹಿಸಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…