ಕಲ್ಯಾಣಸಿರಿ ವಿಶೇಷ

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ಮತ ಎಣಿಕೆ ಸ್ಥಗಿತ,,

Farmers’ Co-operative Society Election: Counting of Votes Stopped

ಆಡಳಿತ ಪಕ್ಷದ ಷಡ್ಯಂತ್ರ ಬಳಸಿ ವಾಮ ಮಾರ್ಗದ ಮೂಲಕ ಚುನಾವಣೆ ಗೆಲುವು ಸಾಧಿಸಲು ಹೊರಟ ಕಾಂಗ್ರೆಸ್ಸಿಗರು,,! ಬಿಜೆಪಿ ಅಭ್ಯರ್ಥಿಗಳ ಆರೋಪ,,,

ವರದಿ : ಪಂಚಯ್ಯ ಹಿರೇಮಠ.
ಕುಕನೂರು : ರವಿವಾರದಂದು ಬೆಳಗ್ಗೆ 9ಕ್ಕೆ ಪ್ರಾರಂಭಗೊಂಡ
ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಾರಂಭ ಹಂತದಲ್ಲಿ ಶಾಂತಿಯುತವಾಗಿ ನಡೆದರು, ಮೊದಲು ಮತದಾರರೆಂದು ಮತದ ಅರ್ಹತೆ ಹೊಂದಿದ 338
ಸಾಲಗಾರರ ಕ್ಷೇತ್ರದ ಸದಸ್ಯರು ಮತದಾರರಿದ್ದು, 79 ಜನ ಸದಸ್ಯರು ಸಾಲಗಾರರಲ್ಲದ ಕ್ಷೇತ್ರದ ಮತದಾರರಿದ್ದರು.

ತನ್ಮದ್ಯೆ ಏಕಾ ಏಕಿ ರವಿವಾರದಂದು ಬೆಳಗ್ಗೆ ಕೊರ್ಟಿನ ಆದೇಶದಂತೆ ಷೇರುದಾರರ ಪೈಕಿ ಇನ್ನೂ 438 ಸದಸ್ಯ ಮತದಾರರು ಇದ್ದು ಇವರು ಅನರ್ಹರಾಗಿದ್ದರೆಂದು ಬಿಜೆಪಿ ಕೈಬಿಟಿತ್ತು, ಆದರೆ ಕೊರ್ಟ್ ಈ ಷೇರುದಾರ ಸದಸ್ಯರು ಮತ ಚಲಾವಣೆಗೆ ಅರ್ಹರು ಎಂದು ಆದೇಶ ಹೊರಡಿಸಿದರಿಂದ, ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳು
ಅಸಮಾಧಾನ ಹೊರ ಹಾಕಿ, ಮಾತನಾಡಿ ಚುನಾವಣೆಗೂ ಮುನ್ನ ಇವರನ್ನು ಅರ್ಹರು ಎಂದು ಪರಿಗಣಿಸಿದ್ದರೇ ನಾವು ಪ್ರಚಾರ ವೇಳೆ
ಇವರಲ್ಲೂ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇವು.

ಆದರೆ ಏಕಾ ಏಕಿ ಅನರ್ಹರಾದ ಸದಸ್ಯರ ಮತವನ್ನು ಕೋರ್ಟ್ ಮೂಲಕ ಅರ್ಹರೆಂದು ಪರಿಗಣಿಸಿ ಈ ರೀತಿಯಾಗಿ ಚುನಾವಣೆ ನಡೆಸುತ್ತಿರುವುದು ಇದು ಆಡಳಿತ ಪಕ್ಷದ ಷಡ್ಯಂತ್ರವಾಗಿದ್ದು, ವಾಮ ಮಾರ್ಗದ ಮೂಲಕ
ಗೆಲುವು ಸಾಧಿಸಲು ಹೊರಟಿದ್ದಾರೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಕ್ರೋಶಗೊಂಡು ಚುನಾವಣಾ ಅಧಿಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ದಬ್ಬಾಳಿಕೆಗೆ ವಿರೋಧ ವ್ಯಕ್ತ ಪಡಿಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಚುನಾವಣಾ ಬೂತ್ ನಿಂದ ಮತ ಪೆಟ್ಟಿಗೆ ಸ್ಥಳಾಂತರ ಮಾಡಿದ ಎಪಿಎಂಸಿ ಆವರಣದ ಸ್ಟ್ರಾಂಗ್ ರೂಮ್ ಮುಂದೆ ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲಾ ಎಂದು ಅಹೋ ರಾತ್ರಿ ಧರಣಿ ನಡೆಸಿ ಪ್ರತಿಭಟನೆಗೆ ಕುಳಿತರು.

ಸೋಮವಾರದಂದು ಬೆಳಗ್ಗೆ ಧರಣಿ ಕುಳಿತ ಎಪಿಎಂಸಿ ಆವರಣಕ್ಕೆ ಬಿಜೆಪಿಯ ವಿವಿಧ ಮುಖಂಡರು ಆಗಮಿಸಿದರು. ನಂತರ ನಡೆಯುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಭಾಗವಹಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ನ್ಯಾಯಯುತವಾಗಿ ಚುನಾವಣಾ ಮತ ಎಣಿಕೆ ನಡೆಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲಾ ಎಂದು ಮುಖಂಡರು ತಿಳಿಸಿದರು.

ಚುನಾವಣಾ ಅಧಿಕಾರಿ ಹನುಮಂತಪ್ಪ ಹೈಡ್ರಾಮಾದ ನಡುವೆ ನಡೆಯದ ಮತ ಎಣಿಕೆ ಕಾರ್ಯ,, ಮಾರುತಿ ಗಾವರಾಳ ಆರೋಪ ,,

ಆಡಳಿತ ಪಕ್ಷದಿಂದ ಅಧಿಕಾರಿಗಳಿಗೆ ಒತ್ತಡ ಮೂರ್ಛೆ ನಾಟಕಕ್ಕೆ ತಯಾರಾದ ಆರ್ ಓ ಬಿಜೆಪಿ ಆರೋಪ,,

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

16 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

16 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

17 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

17 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

17 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

17 hours ago