ಕಲ್ಯಾಣಸಿರಿ ವಿಶೇಷ

ಹೆಗ್ಗಳಿಕೆ ಮತ್ತು ಬಿಕ್ಕಳಿಕೆ

Pride and Hiccup

ತೂರಿ ಬರುತ್ತವೆ
ಹಾರಿ ಬರುತ್ತವೆ
ಪ್ರಶಸ್ತಿ ಪುರಸ್ಕಾರಗಳು .
ಕಳ್ಳರಿಗೆ ಕಾಕರಿಗೆ
ಸುಳ್ಳರಿಗೆ ಮಳ್ಳರಿಗೆ
ಪ್ರವಚನದಲ್ಲಿ ಕಿರುಚುವವರಿಗೆ
ವಚನ ತಿದ್ದುವವರಿಗೆ ಕದಿಯುವವರಿಗೆ
ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ
ಧರ್ಮದ ಗುಂಗು ಹಚ್ಚುವವರಿಗೆ
ತಲೆಯ ಮೇಲೆ ಗ್ರಂಥವಿಟ್ಟು
ಹೆಜ್ಜೆ ಹಾಕಿ ಕುಣಿಯುವವರಿಗೆ .
ಮುಖವಾಡ ಸೋಗು ಹಾಕುವವರಿಗೆ
ಬಣ್ಣ ಬಳಿದು ನಟಿಸುವವರಿಗೆ
ಸುಲಿಗೆ ಮಾಡುವವರಿಗೆ
ಅಕ್ಕ ಅಣ್ಣ ಶರಣರೆಂಬ ಡಂಬಕರಿಗೆ
ಲಿಂಗ ತತ್ವ ಮಾರಿಕೊಂಡವರಿಗೆ
ಬಸವ ದ್ರೋಹ ಮಾಡುವವರಿಗೆ
ಜಂಗಮ ಕೊಂದು
ಸ್ಥಾವರ ಸಲುಹುವವರಿಗೆ
ಬರುತ್ತವೆ ಪ್ರಶಸ್ತಿ ಸನ್ಮಾನಗಳು
ಬಿಟ್ಟಿ ಶಾಲು ಕೊರಳಿಗೊಂದು ಹಾರ
ತಟ್ಟೆಯಲ್ಲಿ ಹಣ್ಣು ಕಾಯಿ
ನಾವೂ ಚಪ್ಪಾಳೆ ತಟ್ಟುತ್ತೇವೆ
ಹಲ್ಲು ಕಿಸಿಯುತ್ತೇವೆ
ಇವರನ್ನು ಮತ್ತೆ ಹೊತ್ತು ಮೆರೆಸುತ್ತೇವೆ.
ಪ್ರಶಸ್ತಿ ಬರುತ್ತವೆ ಸುಳ್ಳರಿಗೆ
ಭಂಡರಿಗೆ ಕಳ್ಳರಿಗೆ
ಪ್ರಶಸ್ತಿ ಸಮ್ಮಾನ ಇವರ ಹೆಗ್ಗಳಿಕೆ

ಬಳಲಿ ಬಾಗಿದ ಜಂಗಮದ ಬಿಕ್ಕಳಿಕೆ

ಡಾ.ಶಶಿಕಾಂತ.ಪಟ್ಟಣ ಪುಣೆ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

7 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

7 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

7 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

7 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

7 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

7 hours ago