A house belonging to former Chief Minister late Nijalingappa is up for sale
ಮನೆಯ ಹೆಸರು “ವಿನಯ”. ಚಿತ್ರದುರ್ಗದ ಡಿಸಿ ಕಚೇರಿ ಬಳೆ ಇರುವ ಮನೆಯಿದು. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ನಿಜಲಿಂಗಪ್ಪನವರಿಗೆ ಸೇರಿದ್ದು. ಪ್ರಾಮಾಣಿಕವಾಗಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಶ್ರೀ ನಿಜಲಿಂಗಪ್ಪನವರು ಪ್ರಮುಖರು. ಇಂತಹ ಮಹಾನುಭಾವರಿಗೆ ಸೇರಿದ ಮನೆ ಇಂದು ಮಾರಾಟಕ್ಕಿದೆ ಎಂಬ ಈ ಜಾಹೀರಾತು ನೋಡಿ ಮನಸ್ಸಿಗೆ ನಿಜಕ್ಕೂ ವೇದನೆ ಆಯಿತು. ಇದನ್ನು ಒಂದು ಸ್ಮಾರಕ ಮಾಡಿ, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರ ಜೀವನ, ಆಡಳಿತ, ರಾಜ್ಯಕ್ಕೆ ಕೊಡುಗೆ, ಅಂದಿನ ವಿದ್ಯಮಾನಗಳು… ಇವುಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಪ್ರಯತ್ನಿಸ ಬೇಕಾಗಿತ್ತು. ಆದರೆ ದಿವ್ಯ ನಿರ್ಲಕ್ಷವೇ ಈ ಮಾರಾಟದ ಜಾಹೀರಾತಿಗೆ ಕಾರಣ! ಈ ಮಹಾನುಭಾವರ ಮನೆ ಮಾರಾಟದ ಸರಕಾಗದೆ, ಸ್ಮಾರಕವಾಗುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. 2008-2013 ಅವಧಿಯಲ್ಲಿ ನಮ್ಮ ಸರ್ಕಾರ ಇದ್ದಾಗ, ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು ವಾಸ ಮಾಡಿದ್ದ ಮನೆಯನ್ನು ಈಗ ಮಾಲೀಕರಾಗಿರುವರು ಒಂದು ವಾಣಿಜ್ಯ ಸಂಕೀರ್ಣ ಮಾಡಲು ಹೊರಟದ್ದನ್ನು ಕೇಳಿ, ನಗರಾಭಿವೃದ್ಧಿ ಸಚಿವ ನಾಗಿದ್ದ ನಾನು ಕೂಡಲೇ ಅದನ್ನು ಒಂದು ಹೆರಿಟೇಜ್ ಕಟ್ಟಡವೆಂದು ಘೋಷಿಸಿ, ಸರ್ಕಾರ ಅದನ್ನು ಒಳ್ಳೆ ಸ್ಮಾರಕ ಮಾಡುವ ದಿಕ್ಕಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಹೆಜ್ಜೆ ಹಾಕಿದ್ದೆ. ಆ ಸ್ಮಾರಕದ ಶಂಕು ಸ್ಥಾಪನೆಗೆ ಅಂದಿನ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬಂದಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅದೇ ರೀತಿ ಕರ್ನಾಟಕದ ಹೆಮ್ಮೆಯ ಲೇಖಕ ಮಾಲ್ಗುಡಿ ಡೇಸ್ ಖ್ಯಾತಿಯ ಶ್ರೀ ಆರ್ ಕೆ ನಾರಾಯಣ್ ಅವರು ವಾಸಿಸುತ್ತಿದ್ದ ಮೈಸೂರಿನ ಮನೆಯನ್ನು ವಾಣಿಜ್ಯ ಸಂಕೀರ್ಣ ಮಾಡಲು ಹೊರಟಾಗ ಅದಕ್ಕೂ ತಡೆ ಒಡ್ಡಿ ಅದನ್ನು ಒಂದು ಸ್ಮಾರಕ ಮಾಡುವುದರಲ್ಲಿ ಯಶಸ್ವಿಯಾಗಿದ್ದೆವು. ಶ್ರೀ ನಿಜಲಿಂಗಪ್ಪನವರು ನಮ್ಮ ನಾಡಿನ ಹೆಮ್ಮೆಯ ನಾಯಕ. ಇಂತಹ ನಾಯಕರ ಮನೆ, ಮುಂದಿನ ಪೀಳಿಗೆಗೆ ಪ್ರೇರಣೆ ಉಂಟುಮಾಡುವ ಸ್ಮಾರಕವಾಗುವುದು ಅತ್ಯಗತ್ಯ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…