ಕಲ್ಯಾಣಸಿರಿ ವಿಶೇಷ

ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು,,,

Naam Ke Vaste Electric Poles in all our three,,,

ವರದಿ : ಪಂಚಯ್ಯ ಹಿರೇಮಠ,

ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳುಂಟು ಆದರೇ ದೀಪಗಳು ಉರಿಯುವದಿಲ್ಲಾ.

ನಮ್ಮೂರಲ್ಲಿ ಹೈ ಮಾಸ್ಟ್ ದೀಪಗಳು ಇವೆ ಎಂದು ಬೀಗಲು ಮಾತ್ರ ಇವೆಯೇ ಎಂಬುದು ತಿಳಿಯುತ್ತಿಲ್ಲಾ.

ಸುಮಾರು ಎರಡು ಮೂರು ತಿಂಗಳುಗಳಿಂದ ವೀರಭದ್ರಪ್ಪ ವೃತ್ತದಿಂದ ಆರ್ಯರ್ ಮಿಲ್ ವೃತ್ತದವರೆಗೆ ಒಂದು ಬದಿಯಲ್ಲಿ ಮಾತ್ರ ಸಾಯಂಕಾಲ ವಿದ್ಯುತ್ ದೀಪ ಹೊತ್ತುತ್ತವೆ ಇನ್ನೊಂದು ಬದಿಯಲ್ಲಿ ಕಂಬಗಳು ಮಾತ್ರ ಗೋಚರಿಸುತ್ತವೆ. ಅದರಲ್ಲಿ ಬೆಳಕು ಮಾತ್ರ ಕಣ್ಮರೆಯಾಗಿವೆ.

ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳನ್ನು ಒಂದು ತಿಂಗಳ ಹಿಂದೆ ವಿಚಾರಿಸಲಾಗಿ ವಿದ್ಯುತ್ ಕಂಬಗಳು ಬಹಳ ಎತ್ತರವಿದ್ದು ಬಲ್ಪಗಳನ್ನು ಹಾಕಿಸಲು ವಾಹನ ವ್ಯವಸ್ಥೆ ಇಲ್ಲಾ ಕೊಪ್ಪಳದಿಂದ ಕರೆಯಿಸಿ ಹಾಕಿಸುವ ವ್ಯವಸ್ಥೆ ಮಾಡಿಸುತ್ತೇವೆ ಎಂದು ಸಬೂಬು ಹೇಳಿದ್ದರು.

ಆದರೆ ಹೇಳಿ ಒಂದು ತಿಂಗಳು ಗತಿಸಿದರು ಇಲ್ಲಿಯವರೆಗೆ ಅದರ ಗೋಜಿಗೆ ಹೋಗಿಲ್ಲಾ. ಈ ರೀತಿಯಾಗಿ ಒಂದು ಬದಿ ಬೆಳಕು ಒಂದು ಬದಿ ಕತ್ತಲು ಇರುವದರಿಂದ ಪಟ್ಟಣಗಳಲ್ಲಿ ಆಗಾಗ ಕಳ್ಳತನ ನಡೆಯುತ್ತಿವೆ ಎಂದು ನಾಗರಿಕರು ಆರೋಪಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಈಗಿರುವ ವಿದ್ಯುತ್ ದೀಪಗಳ ನಿರ್ವಹಣೆಯನ್ನೇ ಪಟ್ಟಣ ಪಂಚಾಯತಿಯವರು ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲಾ ಎಂದು ಆರೋಪಿಸಿದರು.

ಪಟ್ಟಣ ಪಂಚಾಯತಿಯಿಂದ ವಿವಿಧೆಡೆ 1400 ನೂತನ ವಿದ್ಯುತ್ ಕಂಬಗಳನ್ನುಅಳವಡಿಸುವಂತೆ ಶಾಸಕರ ಸೂಚನೆ

ಮೊನ್ನೆ ಪಟ್ಟಣ ಪಂಚಾಯತಿ ಕಾರ್ಯಕ್ರಮ ಒಂದರಲ್ಲಿ ಪಟ್ಟಣ ಪಂಚಾಯತಿಯಿಂದ ವಿವಿಧೆಡೆಗಳಲ್ಲಿ 1400 ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಶಾಸಕ ಬಸವರಾಜ ರಾಯರಡ್ಡಿಯವರು ಹೇಳಿದ್ದರು. ಆದರೆ ಇರುವ ವಿದ್ಯುತ್ ಕಂಬಗಳೇ ನಿರ್ವಹಣೆ ಕಾಣದೇ ಇರುವಾಗ ಹೊಸ ಕಂಬಗಳಿಗೂ ಇದೇ ಸ್ಥಿತಿಯಾಗಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂದಿತು.

ಇನ್ನೂ ಮೇಲಾದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬೆಳಕು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಿ ಎನ್ನುವದು ಪ್ರಜ್ಞಾವಂತರ ಅಂಬೋಣ,,,

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

9 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

9 hours ago