ಕಲ್ಯಾಣಸಿರಿ ವಿಶೇಷ

ಹಾಲುಮತ ಕುರುಬ ಶರಣರ ಕೃಪೆ ಕೊಡುಗೆ ಲಿಂಗಾಯತ ಧರ್ಮಕ್ಕೆ ಅಪಾರ-ಸಂಜಯ ಮಾಕಲ್

ಸಂಜಯ ಮಾಕಲ್
ಹುಡುಕಿದರೆ ನೂರಲ್ಲ ಸಾವಿರಾರು ಹಾಲುಮತ ಕುರುಬ ಸಮುದಾಯದ ಶಿವಶರಣರು ಲಿಂಗಾಯತ ಧರ್ಮದಲ್ಲಿ ಸಿಗುತ್ತಾರೆ. ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಧರ್ಮ ಲಿಂಗಾಯತ ಧರ್ಮ. ಬಸವಾದಿ ಶರಣರು ಹಾಗೂ ಅಂದು ಇಡೀ ಸಮಸ್ತ ಜನಸಮೂಹವೆ ಸೇರಿ ಒಪ್ಪಿ ಸ್ಥಾಪನೆಗೈದಂತಹ ಧರ್ಮ. ಬರಿ ಹನ್ನೆರಡನೇಯ ಶತಮಾನದಲ್ಲಿಯಷ್ಟೆ ಕಾಣದೆ ಇಂದಿಗೂ ನಾವು ಹಾಲುಮತ ಕುರುಬ ಶರಣರ ಕೃಪೆ ಕೊಡುಗೆ ಲಿಂಗಾಯತ ಧರ್ಮಕ್ಕೆ ಅಪಾರವಾಗಿದೆ . ಹನ್ನೆರಡನೆಯ ಶತಮಾನದ ಕುರುಬ ಗೋಲ್ಲಾಳೇಶ, ಕುರುಬರ ಕುಲಗುರು ರೇವಣಸಿದ್ದರು ಲಿಂಗಾಯತ ಧರ್ಮ ನಿರ್ಣಯಗೈದು ಮಾರ್ಗದರ್ಶನವಿತ್ತವರು, ರೇವಣಸಿದ್ದರ ಮಗ ರುದ್ರಮುನಿ ಶರಣರು, ಮಗಳು ಶರಣೆ ರೇಕಮ್ಮ ಇತ್ಯಾದಿ ವಿಜಯನಗರ ಸಾಮ್ರಾಜ್ಯದ ದೊರೆ ಪ್ರೌಢದೇವರಾಯನು ಶರಣರ ಪುರಾಣಗಳು, ವೀರಶೈವ ಕೃತಿಗಳ, ನೂರೊಂದು ವಿರಕ್ತರು ಹೀಗೆ ಮುಳುಗುತ್ತಿದ್ದ ಬಸವಾದಿ ಶರಣ ಸಂಪ್ರದಾಯವನ್ನು ಪುನರುಜ್ಜಿವನಗೊಳಿಸಿದನು. ಈಗಿನ ಕಾಲದಲ್ಲಿ ಬಂತನಾಳ ಶಿವಯೋಗಿಗಳ ಶಿಷ್ಯ ಪರಂಪರೆಯಲ್ಲಿ ಸದ್ಗುರು ಯಲ್ಲಾಲಿಂಗ ಮಹಾರಾಜರು ˌ ಸಜ್ಜಲಗುಡ್ಡದ ಶರಣಮ್ಮನವರು ˌ ಮಹಾ ಶರಣರಾದ ಲಿಂಗೈಕ್ಯರಾದ ನಮಗೆ ಆದರ್ಶಪ್ರಾಯರಾಗಿದ್ದ ಶರಣ ವಿ ಸಿದ್ದರಾಮಣ್ಣನವರು, ಕನಕಗುರುಪೀಠ ಗುರುವರ್ಯರಾದ ನಿರಂಜನಾಂದಪುರಿ ಜಗದ್ಗುರುಗಳು. ಇವರೆಲ್ಲಾ ಲಿಂಗಾಯತ ಧರ್ಮದ ಪ್ರಾಥಃಸ್ಮರಣಿಯರು . ಅವರೆಲ್ಲರಿಗೂ ನನ್ನ ಅನಂತ ಶರಣು ಶರಣಾರ್ಥಿಗಳು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

17 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago