ಕಲ್ಯಾಣಸಿರಿ ವಿಶೇಷ

ಅಂತು ಬಂದಾಯ್ತು ಕುಕನೂರ ಮುಂಡರಗಿ ರಸ್ತೆ ಸಂಚಾರ,,

Kukanur Mundargi road traffic has arrived.

ಕೊಪ್ಪಳ : ಈ ರಸ್ತೆಗಳು ಸಾರಿಗೆ ವಾಹನಗಳು ಓಡಾಡುವ ಹಾಗೂ ಖಾಸಗಿ ವಾಹನಗಳು ಓಡಾಡುವ ರಸ್ತೆಗಳೋ ಅಥವಾ ಯಾವುದೋ ಬಂಡಿ ಜಾಡಿನ ಮಾರ್ಗಗಳೋ ಎನ್ನುವದನ್ನ ಜನ ಪ್ರತಿನಿಧಿಗಳೇ ಹೇಳಬೇಕು,,

ಹೌದು,, ಈ ರೀತಿಯಾಗಿ ಒಂದು ಯಕ್ಷ ಪ್ರಶ್ನೇ ಮೂಡದೇ ಇರಲಾದು,,,

ಇದರ ಕತೆ ಹಾಗೂ ವ್ಯಥೆಯನ್ನ ಒಮ್ಮೇ ನೋಡೋಣ ಬನ್ನಿ,,,

ಈ ಹಳ್ಳ ಹಿಡಿದ ರಸ್ತೆಗಳಿರೋದು ಕುಕನೂರ ಹಾಗೂ ಕೊಪ್ಪಳ ತಾಲೂಕಿಗೆ ಒಳ ಪಡುವ ರಸ್ತೆಗಳು,,,

ಅಂದ್ರೇ ಕುಕನೂರಿನಿಂದ ಕವಲೂರು, ಮುರ್ಲಾಪೂರ, ಘರಡ್ಡಿಹಾಳ ಮಾರ್ಗವಾಗಿ ಮುಂಡರಗಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳು,,,

ಈ ಗ್ರಾಮಗಳು ಬರೋದು ಕೊಪ್ಪಳ ಜಿಲ್ಲಾ ಗಡಿಗಳಲ್ಲಿ,,,

ಸುಮಾರು ಹತ್ತರಿಂದ ಹದಿನೈದು ವರ್ಷಗಳಿಂದ ಈ ಕಿತ್ತೋದು ರಸ್ತೆಗಳಲ್ಲೇ ಇಲ್ಲಿನ ಜನತೆಯ ಪಯಣ,,,

ಹೇಳೋರಿಲ್ಲಾ ಕೇಳೋರಿಲ್ಲಾ ಎನ್ನೋ ಹಾಗಾಗಿದೆ ಜನತೆ ಗೋಳು,,,

ತಲೆ ಕೆಟ್ಟು ಕೆಎಸ್ಆರ್ ಟಿಸಿ ಬಸ್ ಪ್ರಯಾಣ ಬಂದ್ ಮಾಡಿದ ಕುಕನೂರ ಸಾರಿಗೆ ಘಟಕ,,,

ಹೌದು ಸ್ವಾಮಿ ಇಂತ ರಸ್ತೆಲಿ ಓಡಾಡಿದರೇ ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲಾ ಅಂತದ್ರಲ್ಲಿ ಜನಗಳಿಗೆ ಹೇಗೆ ಗ್ಯಾರಂಟಿ ಕೋಡಕಾಗುತ್ತೇ ಅಂಥ ಹೆಸರು ಹೇಳ್ದೇ,,ಹೇಳ್ತಾ ಇರೋ ಸಾರಿಗೆ ನೌಕರ,,,

ಈ ರಸ್ತೆಲಿ ಓಡಾಡ್ತ ಇರೋ ಸಾರಿಗೆ ವಾಹನಗಳು ಪ್ರತಿ ದಿನ ಕಿರಿ, ಕಿರಿ ಮಳೆಯಿಂದ ರಸ್ತೆಯಲ್ಲಿ ಎರೆಮಣ್ಣು ಗಾಲಿಗೆ ಹತ್ತಿ ಉರುಳದೇ ಇರುವ ಚಕ್ರಗಳು, ಮಡು ನಿಂತ ನೀರು, ಎರಡ ದಿನಕ್ಕೊಮ್ಮೆ ವಾಹನಗಳು ರಿಪೇರಿ,,

ರಸ್ತೆಗಳು ಹದಗೆಟ್ಟದರಿಂದ ಬಸ್ ಸಂಚಾರ ನಿಷೇದ,,,

ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಕುಕನೂರು ಸಾರಿಗೆ ಘಟಕವೇ ಆಸರೆ,,,

ಮಳೆ ಬಂದ ಹಿನ್ನೇಲೆಯಲ್ಲಿ ಕೆಸರು ಗದ್ದೆಗಳಂತಾದ ರಸ್ತೆಗಳು, ಇದರಿಂದ ಸಾರಿಗೆ ಬಸ್ ರದ್ದು, ಖಾಸಗಿ ವಾಹನಗಳನ್ನು ಆಶ್ರಯಿಸಿದ ವಿದ್ಯಾರ್ಥಿಗಳು,,,

ಈ ರಸ್ತೆಗಳಲ್ಲಿ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ಅವಘಡ, ಅನಾಹುತ ಸಂಭವಿಸಿದರು ಮೂಕ ಪ್ರೇಕ್ಷಕರಂತೆ ನೋಡ್ತಾ ಕುಳಿತ ಜನಪ್ರತಿನಿಧಿಗಳು,,,

ಇದೆ ರಸ್ತೆಲಿ ನೂರಾರು ಬಾರಿ ಓಡಾಡಿದ್ರು ದುರಸ್ತಿಗೆ ಮುಂದಾಗದ ಶಾಸಕರು ಸಾರ್ವಜನಿಕರ ಆರೋಪ,,

ಈ ರಸ್ತೆಗಳಲ್ಲಿ ಸರಕಾರಿ ವಾಹನವಲ್ಲದೇ, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು, ಸಾರ್ವಜನಿಕ ಓಡಾಟಗಳಿಗೆ ದಿನ ನಿತ್ಯ ನರಕ ಯಾತನೆ ಅನುಭವಿಸ್ತಾ ಇರೋ ಪ್ರಯಾಣಿಕರು,,,

ಈ ಕೂಡಲೇ ಕೊಪ್ಪಳ, ಕುಕನೂರು ತಾಲೂಕಿನ ಜನ ಪ್ರತಿನಿಧಿಗಳು ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಸುಗಮ ರಸ್ತೆಗಳನ್ನು ನಿರ್ಮಾಣ ಮಾಡಲು ಮುಂದಾಗದಿದ್ದಲ್ಲಿ ಸಾರ್ವಜನಿಕರೊಂದಿಗೆ ವಿದ್ಯಾರ್ಥಿಗಳು ಕೂಡಿ ಬೆಳಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ,,,,

ವರದಿ : ಪಂಚಯ್ಯ ಹಿರೇಮಠ,,

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

7 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

7 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

7 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

7 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

7 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

7 hours ago