Vishwanath Kare, a food expert, has called for giving more importance to cleanliness.
ಹನೂರು :ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡಬೇಕು ಆದರೆ ಎಲ್ಲಾರು ಪ್ರವಾಸಿತಾಣಗಳಲ್ಲಿರುವ ಹೋಟೆಲ್ ಗಳಲ್ಲಿ ಹೆಚ್ಚು ಆಶ್ರಯ ಪಡೆದು ಊಟ ಉಪಚಾರ ಮಾಡಬೇಕಾಗುತ್ತದೆ ಅಂತಹ ಸಮಯದಲ್ಲಿ ವ್ಯಾಪಾರಸ್ತರು ಗೃಹ ಬಳಕೆಯ ಅನಿಲಗಳನ್ನು ವಾಣಿಜ್ಯ ಬಳಕೆಗೆ ಬಳಸಬಾರದು ಎಂದು ಶಿರೇಸ್ತೆದಾರ್ ವಿಶ್ವನಾಥ್ ರವರು ತಿಳಿಸಿದರು .
ಹನೂರು ತಾಲ್ಲೂಕಿನ
ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು ಹೋಟೆಲ್ ಗಳು , ಉಪಹಾರದಶಿನಿ ಹಾಗೂ ಟೀ ಅಂಗಡಿಗಳಾದ ಕೆ ವಿ ಎನ್ ಹೋಟೆಲ್, ವಿಜಿ ಟೀ ಸ್ಟಾಲ್, ಹೋಟೆಲ್ ಅನ್ನಪೂರ್ಣ ಪ್ಯೂರ್ ವೆಜ್, ನಂಜುಂಡೇಶ್ವರ ಭವನ ಮತ್ತು ಹೋಟೆಲ್ ಉಡುಪಿ ಉಪಚಾರ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಎಲ್ಲಾ ಕಡೆಗಳಲ್ಲಿಯು ಸಹ ವಾಣಿಜ್ಯ ಬಳಕೆ ಅನಿಲ ಸಿಲೆಂಡರ್ ಗಳನ್ನು ಮಾತ್ರ ಬಳಸುತ್ತಿದ್ದು, ಕೆಲವು ಟೀ ಕ್ಯಾಂಟೀನ್ ಗಳಲ್ಲಿ ಗೃಹ ಬಳಕೆ ಸಿಲೆಂಡರ್ ಗಳನ್ನು ಬಳಸುವುದು ಅಪರಾಧವಾಗಿರುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಗೃಹಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ವ್ಯಾಪಾರದಲ್ಲಿ ಬಳಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ LIQUEFIED PETROLEUM GAS (REGULATION OF
SUPPLY AND DISTRUBUTION) ORDER 2000 ರೀತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ನಂದೀಶ್ ,ಮಹದೇವಸ್ವಾಮಿ ,ಮಾದಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು .
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…