ಕಲ್ಯಾಣಸಿರಿ ವಿಶೇಷ

ಹೆಸರು ಬೆಳದ ರೈತರು ಸಾಲದಸೂಳಿಗೆ,,ಬೆಂಬಲ ಬೆಲೆ, ಬೆಳೆ ವಿಮೆ ನೀಡಲು ರೈತರಆಗ್ರಹ,

Nameless farmers are in debt. Farmers’ demand for support price, crop insurance


ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಮೋಡ ಕವಿದ ವಾತಾವರಣ, ಮಳೆ ಕೊರತೆ, ಕೂಲಿ ಆಳಿನ ಸಮಸ್ಯೆಯಿಂದ ತಾಲೂಕಿನಾದ್ಯಂತ ರೈತರು ಹೈರಾಣಾಗಿದ್ದಾರೆ.

ಕಳೆದ ಬಾರಿ ಬಂದ ಬೆಳೆಯ ನಿರೀಕ್ಷೇ ಹೊಂದಿ, ತಾಲೂಕಿನಾದ್ಯಂತ ರೈತರು ಈ ಬಾರಿಯು ಹೆಸರು ಬೆಳೆಯಲು ಮುಂದಾಗಿದ್ದು ಅವರ ನಿರೀಕ್ಷೆ ಹುಸಿಯಾಗಿದ್ದು ರೈತರಿಗೆ ಗರ ಸಿಡಿಲು ಬಡಿದಂತಾಗಿದೆ.

ಒಂದು ಎಕರೆ ಬಿತ್ತನೆಗೆ ಹತ್ತರಿಂದ ಹನ್ನೇರಡು ಸಾವಿರ ರೂಪಾಯಿ ಹಾಕಿ ಬಿತ್ತನೆ ಕಾರ್ಯವನ್ನು ಮಾಡಿದ್ದರು.

ಈ ಕುರಿತು ಕುಕನೂರಿನ ದೇವಪ್ಪ ಮೇಟಿಯವರು ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡು ಮಾತನಾಡಿ, ನಮ್ಮ ಸ್ವಂತ ಜಮೀನು ನಾಲ್ಕು ಎಕರೆ ಇದೆ. ಒಂದು ಎಕರೆಗೆ ಹತ್ತರಿಂದ ಹನ್ನೇರಡು ಸಾವಿರ ಹಾಕಿ ಹೆಸರನ್ನು ಬಿತ್ತನೆ ಮಾಡಿದ್ದು, ಬೇರೆಯವರ ಇಪ್ಪತ್ತು ಎಕರೆ ಕೊರು, ಲಾವಣಿಯಂತೆ ಮಾಡಿದ್ದೇವೆ.

ಸರಿಯಾಗಿ ಮಳೆಯಾಗದೇ ಮೋಡ ಕವಿದ ವಾತಾವರಣದಿಂದ ಬೆಳೆಗಳು ಅಷ್ಟಕಷ್ಟೇ ಆಗಿದ್ದು ಈಗ ಕಟಾವಿಗೆ ಬಂದಿದ್ದು, ಕೂಲಿ ಆಳುಗಳನ್ನು ಹುಡಕಿದರು ದೊರೆಯುತ್ತಿಲ್ಲಾ, ದೊರೆತರು ಒಬ್ಬರಿಗೆ ನಾಲ್ಕು ನೂರು ರೂಪಾಯಿ ಕೂಲಿ ನೀಡಬೇಕು, ಒಂದು ಎಕರೆಗೆ ಮೂರರಿಂದ ನಾಲ್ಕು ಸಾವಿರ ಕೂಲಿ ನೀಡಿ ಹೆಸರು ತೆಗೆದರೇ ಕೈಯಿಂದ ಹಣ ಹೋಗುತ್ತದೆ.

ಯಂತ್ರಗಳಿಂದ ಕಟಾವು ಮಾಡಿಸಿದರೇ ಎಕರೆಗೆ ಎರಡು ಸಾವಿರ ತಗಲುತ್ತದೆ. ಅನಿವಾರ್ಯವಾಗಿ ನಾವೆಲ್ಲ ರೈತರು ಯಂತ್ರಗಳ ಮೊರೆ ಹೋಗುತ್ತಿದ್ದೇವೆ.
ಈಗ ಮಾರುಕಟ್ಟೆಯಲ್ಲಿ ಕ್ವೀಂಟಲ್ ಹೆಸರಿಗೆ ಐದರಿಂದ ಆರು ಸಾವಿರ ರೂಪಾಯಿಗಳು ಇದ್ದು, ನಾವು ವ್ಯಯಿಸಿದಷ್ಟು ಹಣ ನಮಗೆ ವಾಪಸ ಆಗುತ್ತಿಲ್ಲ, ಆಳುಗಳಿಂದ ಕಟಾವು ಮಾಡಿದ ಹೆಸರು ಬೆಳೆಗೆ ಏಳರಿಂದ ಎಂಟು ಸಾವಿರ ರೂಪಾಯಿ, ಯಂತ್ರಗಳಿಂದ ಕಟಾವು ಮಾಡಿದರೆ ಐದರಿಂದ ಆರು ಸಾವಿರ ರೂಪಾಯಿ ದೊರೆಯುತ್ತದೆ.

ಯಂತ್ರಗಳಿಂದ ಕಟಾವು ಮಾಡಿದರೆ ಅಲ್ಪ ಸ್ವಲ್ಪ ಭೂಮಿಯಲ್ಲಿ ಉಳಿದುಬಿಡುತ್ತದೆ ಹೀಗಾದರೇ ನಮ್ಮ ರೈತರ ಪಾಡೇನು. ಈ ಕಾರಣದಿಂದಲೇ ರಾಜ್ಯದಲ್ಲಿ ಪ್ರತಿದಿನ ರೈತರ ಆತ್ಮಹತ್ಯೆಗಳಂತ ಪ್ರಕರಣಗಳು ಜರುಗುತ್ತಿರುವುದು ಎಂದರು.

ಈ ಎಲ್ಲವನ್ನು ಅರಿತಿರುವ ಜನಪ್ರತಿನಿಧಿಗಳು, ಸರಕಾರದ ಅಧಿಕಾರಿಗಳು, ರೈತರು ಬೆಳೆದ ಹೆಸರು ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಅವರು ಹೇಳಿದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

14 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

14 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

15 hours ago