ಕೊಪ್ಪಳ : ಸಾರ್ವಜನಿಕರು ತುಂಬುವ ಎಲ್ಐಸಿ ಪ್ರಿಮಿಯಮ್ ಮೇಲೆ
ಹಾಕಲಾಗಿರುವ ಜಿ.ಎಸ್.ಟಿ.ಯನ್ನು ಕೂಡಲೇ ರದ್ದುಗೊಳಿಸಲು
ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಕೊಪ್ಪಳ
ಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ ಅವರಿಗೆ ಇಂದು
ಕೊಪ್ಪಳದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿ
ಮತ್ತು ಪ್ರತಿನಿಧಿಗಳ ಸಂಘದಿAದ ಮನವಿ ಪತ್ರ
ಸಲ್ಲಿಸಲಾಯಿತು.
ವಿಭಾಗೀಯ ಕಾರ್ಯದರ್ಶಿಯಾದ ಕಾ.ಎಂ.ರವಿ ಮಾತನಾಡುತ್ತಾ,
ತಮ್ಮ ವೈಯಕ್ತಿಕ ಜೀವನ ಭದ್ರತೆಗಾಗಿ ತುಂಬುವ ಎಲ್ಐಸಿ
ಪ್ರಿಮಿಯಮ್ ಮೇಲೆ ಜಿ.ಎಸ್.ಟಿ ಹೇರುವುದು ಎಷ್ಟು ಸಮಂಜಸ ಎಂದು
ಪ್ರಶ್ನಿಸಿದರು. ಈಗಾಗಲೇ ಹಲವಾರು ಬಾರಿ ಉದ್ಯೋಗಿ ಮತ್ತು
ಪ್ರತಿನಿಧಿಗಳ ಸಂಘದಿAದ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ
ಮಾಡಲಾಗಿದೆ. ಲೋಕಸಭಾ ಸದನದಲ್ಲಿ ಕೊಪ್ಪಳ ಲೋಕಸಭಾ
ಸ್ಥಾನಕ್ಕೆ ಪ್ರತಿನಿಧಿಸುತ್ತಿರುವ ತಾವುಗಳು ಸದನದಲ್ಲಿ ಈ
ಕುರಿತು ಧ್ವನಿ ಎತ್ತಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಇದರಿಂದ ಇಡೀ ದೇಶದ ಜನತೆಗೆ ಅನುಕೂಲವಾಗುತ್ತದೆ ಎಂದರು.
ಇನ್ನು ಆದಾಯ ತೆರಿಗೆ ಕಡಿತಗೊಳಿಸುವ ವಿಷಯದಲ್ಲಿ ಜನತೆಯ
ಪರವಾಗಿ ಧ್ವನಿ ಎತ್ತಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್.ಐ.ಸಿ ನೌಕರರರಾದ ಕಾಂ.ವೀರೇಶ,
ಕಾA.ಸAತೋಷ, ಕಾಂ.ಹೆಚ್.ವಿ.ಪೂಜಾ, ಕಾಂ.ಮಲ್ಲಿಕಾರ್ಜುನ,
ಕಾA.ಶೇಖರಪ್ಪ, ಕಾಂ.ಸಾಗರ ಮತ್ತು ಪ್ರತಿನಿಧಿ ಮಿತ್ರರರು,
ಅಭಿವೃದ್ಧಿ ಅಧಿಕಾರಿಗಳು, ಆಡಳಿತ ಸಿಬ್ಬಂದಿ ವರ್ಗದ ಎಲ್ಲಾ
ನೌಕರರು ಈ ಸಂದರ್ಭದಲ್ಲಿ ಹಾಜರಿದ್ದರು.
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…