ವರದಿ: ಬಂಗಾರಪ್ಪ ಸಿ .
ಹನೂರು :ಹಿಂದಿನ ಕಾಲದಿಂದಲೂ ಪ್ರತಿಯೊಂದು ಹಳ್ಳಿಯಲ್ಲು ಹಬ್ಬಗಳನ್ನು ಆಚರಿಸುತ್ತಿರುವುದು ವಾಡಿಕೆ ಅದರಂತೆ ಪ್ರಸ್ತುತದಲ್ಲಿ ಸಹ ಗ್ರಾಮದ ಜನರೆಲ್ಲ ಒಂದೇಡೆ ಸೇರಿ ಒಮ್ಮತದಿಂದ ಹಬ್ಬಗಳನ್ನು ಆಚರಿಸುತ್ತಿರುವುದರಿಂದ ಶುಭ ಸಂಕೇತವಾದಂತಾಗಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು .
ವಿಧಾನಸಭಾ ಕ್ಷೇತ್ರದ ಕೌದಳ್ಳಿ ,ಕೆಂಪಯ್ಯನಹಟ್ಟಿ ,ಮತ್ತು ಶೇಟ್ಟಳ್ಳಿ ಸೇರಿದಂತೆ ವಿವೀದೆಡೆ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಸಮುದಾಯದ ಬಿದಿಯಲ್ಲಿ ಇಂದು ನಡೆದ ಗ್ರಾಮ ದೇವತೆಯ ಹಬ್ಬವು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯವೆಂದರು. ಇದೇ ಸಮಯದಲ್ಲಿ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಇದೇ ಸಮಯದಲ್ಲಿ ಮಾಜಿ ಶಾಸಕರ ಜೊತೆಯಲ್ಲಿ ಭಾಗವಹಿಸಿ ಮಾತನಾಡಿದ ಉದ್ಯಮಿ ಪೊನ್ನಾಚಿ ರಂಗಸ್ವಾಮಿಯವರು ಪೂರ್ವಜರ ಪುಣ್ಯದ ಫಲವಾಗಿ ಇಂದು ನಾವುಗಳು ಬಹಳ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೆವೆ ಅದಕ್ಕೆಲ್ಲ ಕಾರಣ ಪೂರ್ವಜರ ಶ್ರಮವಾಗಿದೆ ,ನಾವು ಕೈಗೊಳ್ಳುವ ಪ್ರತಿಯೊಂದು ಕೆಲಸವು ದೈವ ಸಂಕಲ್ಪವಿಲ್ಲದೆ ನಡೆಯುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಉದ್ನುರು ಸಿದ್ದರಾಜು ,ಕೌದಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾಗರಾಜುಸ್ವಾಮಿ .ಮುಖಂಡರುಗಳಾದ ನಟರಾಜುಗೌಡ,ಶಿವಕುಮಾರ್ ,ಪ್ರವೀಣ್ ಕುಮಾರ್ ,ಗೋವಿಂದರಾಜು ,ರವಿಕುಮಾರ್ , ಎಪಿಎಮ್ ಸಿ ಅಧ್ಯಕ್ಷರಾದ ಚಿಕ್ಕಮಾದನಾಯ್ಕ ,ಪ್ರವೀಣ್ ಗ್ರಾಮದ ಮುಖಂಡರು ಕಾರ್ಯಕರ್ತರು ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…