Irakallagada Fort Trek
ಕೊಪ್ಪಳ ಫೆ. ೧೦: ಕೊಪ್ಪಳ ಚಾರಣ ಬಳಗದಿಂದ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಕೋಟೆ ವೀಕ್ಷಣೆ ಮತ್ತು ಚರಿತ್ರೆ ಮನನ ಚಾರಣ ಕಾರ್ಯಕ್ರಮ ಫೆ. ೧೧ರ ಭಾನುವಾರ ಬೆಳಿಗ್ಗೆ ೭.೦೦ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಇರಕಲ್ಲಗಡ ಕೋಟೆ ಚರಿತ್ರೆ ಕುರಿತು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಮಂಜುನಾಥ ಕೀರ್ತಿಗೌಡರವರು ಉಪನ್ಯಾಸ ನೀಡಲಿದ್ದಾರೆ. ಸದರಿ ಚಾರಣದಲ್ಲಿ ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು, ವಿದ್ಯಾರ್ಥಿಗಳು, ಇತಿಹಾಸ ಪ್ರಿಯರು ಮುಂತಾದವರು ಚಾರಣದಲ್ಲಿ ಭಾಗವಹಿಸಲಿದ್ದಾರೆ. ಈ ಇರಕಲ್ಲಗಡ ಕೋಟೆ ಚಾರಣವು ಐದನೇ ಚಾರಣವಾಗಿದ್ದು, ಈಗಾಗಲೇ ಕೊಪ್ಪಳ ಕೋಟೆ, ಮಳೆಮಲ್ಲೇಶ್ವರ ಪರ್ವತ, ಬಹದ್ದೂರಬಂಡಿ ಕೋಟೆ, ಇಟಗಿ ಮಹಾದೇವ ದೇವಾಲಾಯ ಚಾರಣಗಳನ್ನು ಮಾಡಲಾಗಿದೆ. ಸದರಿ ಚಾರಣದಲ್ಲಿ ಆಸಕ್ತರು ಆಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ೯೪೪೮೫೭೦೩೪೦, ಡಾ.ವಿಜಯ ಸುಂಕದ ೯೯೮೦೬೬೧೫೭೧ ಇವರನ್ನು ಸಂಪರ್ಕಿಸಬಹುದು.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…