Sports fans participating in the bidding process of Netaji Premier League Season 4
ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಮನುಷ್ಯನ ಜೀವನದಲ್ಲಿ ಕ್ರೀಡೆಯು ಅತಿಮುಖ್ಯ ನಮ್ಮ ದೇಹವು ಸದಾ ಆರೋಗ್ಯವಂತಾರಾಗಿಲು ದೇಹದ ಅಂಗಾಂಗಗಳು ಸಕ್ರಿಯವಾದ ಪಾತ್ರ ವಹಿಸಬೇಕು ಹಾಗೇಯೆ ನಮ್ಮ ಹನೂರು ಭಾಗದ ಯುವಕರು ಕ್ರೀಡೆಯನ್ನು ಅಯೋಜನೆ ಮಾಡಿ ಪ್ರತಿಭೆಯನ್ನು ಹೊರ ತರುವುದು ಹೆಮ್ಮೆಯ ವಿಷಯ ಎಂದು ಅಯೋಜಕರಿಗೆ ಕೀವಿ ಮಾತನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಲ್ ನಾಗೇಂದ್ರ ತಿಳಿಸಿದರು .
ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ನೇತಾಜಿ ಕ್ರೀಕೇಟರ್ಸ್ ಹಾಗೂ ಶಾಸಕರಾದ ಎಂ ಆರ್ ಮಂಜುನಾಥ್ ರ ಸಹಯೋಗದೊಂದಿಗೆ ನಡೆಸುವ ಹರಾಜು ಪ್ರಕ್ರಿಯೆಯ ಉದ್ಘಾಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ವ್ಯಕ್ತಿಯ ಪ್ರತಿಭೆಯನ್ನು ಖರೀದಿ ಮಾಡುಲು ಯಾರಿಂದಲೂ ಸಾದ್ಯವಿಲ್ಲ ಆದರೆ ಅವರ ಸಾಮರ್ಥ್ಯವನ್ನು ಅರಿಯಬಹುದು ಕ್ರೀಡೆಯು ಮನುಷ್ಯ ಬೆಳಿಗ್ಗೆ ಎದ್ದ ನಂತರ ವ್ಯಾಯಮ ಮಾಡುವ ಮುಖಾಂತರ ಪ್ರಾರಂಭವಾಗಿ ದಿನದ ಎಲ್ಲಾ ಚಟುವಟಿಕೆಗಳಿಗೂ ಅನ್ವಯಮಾಡಬಹುದು .ನಮ್ಮ ಯುವಕರು ಸ್ವಾತಂತ್ರ್ಯ ಸೇನಾನಿ ನೇತಾಜಿಯವರ ಹೆಸರಿನಲ್ಲಿ ಕ್ರೀಡೆ ಅಯೋಜನೆ ಮಾಡುವುದು ಬಹಳ ಸಂತೋಷದ ವಿಷಯ ಇಂತಹ ಕಾರ್ಯಕ್ರಮದಿಂದ ಹೆಚ್ಚು ಗ್ರಾಮೀಣ ಪ್ರತಿಭೆಗಳು ಹೋರ ಹೊಮ್ಮಲಿ ಇಂತಹ ಆಯೋಜಕರಿಗೆ ಸ್ಥಳಿಯ ಶಾಸಕರು ಸಹಕಾರ ನೀಡುತ್ತಿರುವುದು ಸಂತೋಷಕರವಾದ ವಿಷಯ ಎಂದರು . ಇದೇ ಸಂದರ್ಭದಲ್ಲಿ ಸದ್ಭಾವ ಸೇವ ಸಮಿತಿಯ ಅಧ್ಯಕ್ಷರಾದ ಗಂಗರಾಜು ,ಕೆಇಬಿ ಗುತ್ತಿಗೆದಾರರಾದ ರವಿ , ಆಯೋಜಕರಾದ ಶಶಿ ಕುಮಾರ್ ,ಚೇತನ್ ಕುಮಾರ್ , ಸಂತೋಷ್ , ಶಾರುಖ್ ,ರೈತ ಮುಖಂಡರಾದ ಬಸವರಾಜು ಕಾಂಚಳ್ಳಿ ಸೇರಿದಂತೆ, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ತಂಡಗಳಾದ ಎಮ್ ಸಿ ಸಿ ಬೆಟ್ಟ , ಎವಿಎಮ್ ಟೈಟನ್ಸ್ .ಥಾಡೊ ವಾರಿಯರ್ಸ್ .ಬಿ ಎಸ್ ಎಫ್ ಟೈಗರ್ಸ್ . ರೈಸಿಂಗ್ ಸ್ಟಾರ್ ,ಪವರ್ ವಾರಿಯರ್ಸ್ . ಮಾನಸ ಸ್ಟಾರ್ ಬಾಯ್ಸ್ . ಗೋಕುಲ ಕ್ರೀಕೆಟರ್ಸ್ ಸೇರಿದಂತೆ ಇನ್ನಿತರರು ಭಾಗವಹಿಸಿದರು .ಅತೀ ಹೆಚ್ಚು ಹರಾಜಿನಲ್ಲಿ ಲುಕ್ಮಾನ್ -2750 ರೂಗಳಿಗೆ ಪವರ್ ವಾರಿಯರ್ಸ್ ಪಾಲಾದರು .ಕಾರ್ತಿಕ್ 1500 ರೂಗಳಿಗೆ ಎಮ್ ಸಿ ಸಿ ಬೆಟ್ಟದ ಪಾಲಾದರು .1450 ರೂಗಳಿಗೆ ಅಪ್ಪು ಮಾನಸ ಸ್ಟಾರ್ ಬಾಯ್ಸ್ ಪಾಲಾದರು .
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…