ಯಥಾಸ್ಥಿತಿವಾದಿಗಳಿಗೊಂದು ಎಚ್ಚರಿಕೆ ನೀಡಿರಿ.


A word of caution to the status quo.

ಬಸವ ತತ್ವದ ಮೇಲಿನ ದಾಳಿ ಇಂದು ನಿನ್ನೆಯದಲ್ಲ. ಇದು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಯಾರು ಬಸವ ಪ್ರಣೀತ ಲಿಂಗಾಯತ ಧರ್ಮದ ಮೂಲ ತಿರುಳನ್ನು ಜನ ಮಾನಸಕ್ಕೆ ಅರುಹಲು ಮುಂದಡಿ ಇಡುತ್ತಾರೋ ಅವರಿಗೆ ಟೀಕೆ ಟಿಪ್ಪಣಿ ಕಟ್ಟಿಟ್ಟ ಬುತ್ತಿ.

ಆರೋಗ್ಯಕರ ಚರ್ಚೆ ಚಿಂತನೆಗೆ ಬಸವ ತತ್ವ ಮನ್ನಣೆ ಕೊಡುತ್ತದೆ. ಚರ್ಚೆ ಚಿಂತನೆಗಳೆ ಅದರ ಜೀವ ಜೀವಾಳ. ಆದರೆ ಯಥಾಸ್ಥಿತಿವಾದಿಗಳು ಚರ್ಚೆ ನಡೆಯಬೇಕಿರುವ ಸಂಗತಿಗಳನ್ನು ವಿವಾದಗಳನ್ನಾಗಿ ಪರಿವರ್ತಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಾರೆ. ಬೇಕಂತಲೆ ಜನ ಸಾಮಾನ್ಯರ ಭಾವನೆಗಳನ್ನು ಕೆರಳಿಸುತ್ತಾರೆ. ಇದರ ಮೂಲಕ ಬಸವ ತತ್ವವನ್ನು ಹೇಳುವ ವ್ಯಕ್ತಿಯ ಮೇಲೆ ದಾಳಿ ನಡೆಸಿ, ಆ ತತ್ವ ಮತ್ತೆ ಮತ್ತೆ ಮೂಲೆ ಗುಂಪಾಗುವಂತೆ ನೋಡಿಕೊಳ್ಳುತ್ತಾರೆ.

ಹನ್ನೆರಡನೆಯ ಶತಮಾನದಲ್ಲಾದ ಶರಣರ ಮೇಲಿನ ಪೈಶಾಚಿಕ ದಾಳಿ, ಬರ್ಬರ ಹಿಂಸೆ, ವಚನಗಳ ಕಟ್ಟುಗಳನ್ನು ಸುಟ್ಟದ್ದು ಇದೆ ಹಿನ್ನೆಲೆಯಲ್ಲಿ. ಬಸವ ತತ್ವ ಜನ ಸಾಮಾನ್ಯನನ್ನು ತಲುಪಿಸದರೆ ಅವರ ಬದುಕಿನಲ್ಲಿ ಆವರಿಸಿರುವ ಕತ್ತಲು ಹೋಗುತ್ತದೆ. ಕತ್ತಲು ಹೋದರೆ ಧರ್ಮದ ಹೆಸರಿನಲ್ಲಿ ಧಗಲ್ಬಾಜಿಗಳು ಮಾಡುವ ಹಲಾಲುಖೋರತನ ಬಟಾ ಬಯಲಾಗುತ್ತದೆ. ಇವರು ತುತ್ತು ಅನ್ನಕ್ಕೂ ಕಂಗಾಲಾಗುವ ಸ್ಥಿತಿ ಬರುತ್ತದೆ.

ಇದೆಲ್ಲವನ್ನು ಚೆನ್ನಾಗಿ ಅರಿತಿರುವ ಪಟ್ಟಭದ್ರರು ಕ್ರಿಯಾಶೀಲವಾಗಿದ್ದಾರೆ. ಆದರೆ ಜನ ಸಾಮಾನ್ಯ ಮಂಕಾಗಿದ್ದಾನೆ. ಬಸವಾದಿ ಶರಣರ ಚಿಂತನೆಗಳನ್ನು ಅರಿತವರಾದ ಮಠಾಧೀಶರು, ಬರಹಗಾರರು, ರಾಜಕಾರಣಿಗಳು, ಹೋರಾಟಗಾರರು,ಮುಂತಾದವರೆಲ್ಲ ಒಂದಾಗಿ ಕೊಳ್ಳಿ ದೆವ್ವಗಳನ್ನು ಹಿಮ್ಮೆಟ್ಟಿಸಬೇಕಿದೆ.

ಸರಕಾರವೂ ಸಹ ಇಂಥ ಆರೋಗ್ಯಪೂರ್ಣ ಚಟುವಟಿಕೆಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ತನ್ನ ಸಂವಿಧಾನಿಕ ಹೊಣೆ ಹೊತ್ತುಕೊಳ್ಳಬೇಕಿದೆ.

ಇದೆ ತಿಂಗಳ ೨೨ ರಂದು ಬೆಂಗಳೂರಿನಲ್ಲೊಂದು ಸಭೆ ನಡೆಸಲಾಗುತ್ತಿದೆ. ಆಸಕ್ತರು ಭಾಗವಹಿಸಿ, ಯಥಾಸ್ಥಿತಿವಾದಿಗಳಿಗೊಂದು ಎಚ್ಚರಿಕೆ ನೀಡಿರಿ.

೦ ವಿಶ್ವಾರಾಧ್ಯ ಸತ್ಯಂಪೇಟೆ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

15 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

15 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

15 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

15 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

15 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

15 hours ago