ಕಲ್ಯಾಣಸಿರಿ ವಿಶೇಷ

ಟೋಲ್ ಹಣ ಬೇಕು ! ದುರಸ್ತಿ ಬೇಡ ! ಇದು ಹಿಟ್ನಾಳ ಟೋಲ್ ಕಥೆ.

Need toll money! Do not repair! This is the toll story of Hitna.


ಕೊಪ್ಪಳ: ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹಲವು ಟೋಲ್ ಪ್ಲಾಜಾಗಳು ಅಸ್ತಿತ್ವದಲ್ಲಿವೆ.ಅವುಗಳ ಮುಖ್ಯ ಕೆಲಸ ಟೋಲ್ ಸಂಗ್ರಹಿಸುವುದು ಮಾತ್ರ.ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಲು ಅವು ವಿಫ಼ಲವಾಗಿವೆ. ಕನಿಷ್ಠ ಶೌಚಾಲಯದ ಸೌಲಭ್ಯವನ್ನು ಅವು ಒದಗಿಸಿಲ್ಲ.ಶೌಚಾಲಯದ ಕಟ್ಟಡಗಳೇನೋ ಇವೆ.ಆದರೆ ಅವುಗಳು ಬಳಕೆ ಮಾಡುವ ಸ್ಥಿತಿಯಲ್ಲಿ ಇಲ್ಲ.ಕೇಳುವವರು ಇದ್ದರೆ ತಾನೇ ಅವರು ಅವುಗಳನ್ನು ದುರಸ್ತಿ ಮಾಡಿಸಿಯಾರು ! ಆದರೆ ಕೇಳುವವರೇ ಇಲ್ಲ.

ಕೊಪ್ಪಳ ತಾಲೂಕಿನ ಹಿಟ್ನಾಳ ಕ್ರಾಸ್ ಬಳಿ ಇರುವ ಟೋಲ್ ಪ್ಲಾಜಾದ ಕಥೆ ಇದಕ್ಕೊಂದು ತಾಜಾ ಉದಾಹರಣೆ. ಬೂದಗುಂಪಾ ಕ್ರಾಸ್ ನಿಂದ ಕೊಪ್ಪಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಟೋಲ್ ನವರು ಎಲ್ಲಾ ವಾಹನಗಳಿಂದಲೂ ಕರಾರುವಕ್ಕಾಗಿ ಹಣ ಪಡೆಯುತ್ತಾರೆ.ಆದರೆ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫ಼ಲರಾಗಿದ್ದಾರೆ.

ಈ ರಸ್ತೆಯ ಎರಡೂ ಬದಿಯಲ್ಲಿ ಪ್ರಯಾಣಿಕರಿಗಾಗಿ ಪಾಯಿಖಾನೆಗಳನ್ನು ನಿರ್ಮಿಸಲಾಗಿದೆ.ಅವುಗಳಲ್ಲಿ ನೀರಿನ ಸೌಲಭ್ಯ ಇಲ್ಲ.ನೀರು ಸಂಗ್ರಹಿಸುವ ‘ವಾಟರ್ ಟ್ಯಾಂಕ್’ ಮಾಯವಾಗಿವೆ.ಪಾಯಿಖಾನೆಯ ಮೇಲಿನ ತಗಡು ಎಂದೋ ಕಿತ್ತು ಹೋಗಿವೆ.

ಮಲ ವಿಸರ್ಜನೆ ಇರಲಿ,ಮೂತ್ರ ಮಾಡಲು ಅಲ್ಲಿ ಸಾಧ್ಯವಿಲ್ಲ.ಹತ್ತಿರ ಹೋದರೆ ವಿಪರೀತವಾದ ಕೆಟ್ಟ ವಾಸನೆ ಮೂಗಿಗೆ ರಾಚುತ್ತದೆ.ಒಳ ಹೋಗಲು ಸಾಧ್ಯವೇ ಇಲ್ಲ.ಒಳ ಹೋಗುವ ದಾರಿಯಲ್ಲಿಯೇ ಮುಳ್ಳಿನ ಗಿಡಗಳು ಬಳೆದು ನಿಂತಿವೆ.

ದೂರದ ಸೊಲ್ಲಾಪುರದಿಂದ ಪ್ರಯಾಣಿಕರು ಈ ರಸ್ತೆಯಲ್ಲಿ ತಮ್ಮ ವಾಹನಗಳ ಮೂಲಕ ಸಾಗುತ್ತಾರೆ. ತುರ್ತಾಗಿ ಬಹಿರ್ದೇಶೆಗೆ ಹೋಗ ಬೇಕಾದರೆ ಅವರೇನು ಮಾಡಬೇಕು ? ಯಾರೂ ಪ್ರಶ್ನಿಸುವವರೇ ಇಲ್ಲ.

ಟೋಲ್ ಪಾವತಿ ಮಾಡುವವರಿಗೆ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಬೇಕಾದ ಟೋಲ್ ಗುತ್ತಿಗೆದಾರರು,ಯಾವುದೇ ತ೦ಟೆ ತಕರಾರು ಇಲ್ಲದೆ ಟೋಲ್ ಹಣ ವಸೂಲಿ ಮಾಡುತ್ತಿದ್ದಾರೆ.
ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಜನ ಪ್ರತಿನಿಧಿಗಳು ಸಂಚರಿಸುತ್ತಾರೆ.ಅವರ ದೃಷ್ಟಿ ಅದೆಲ್ಲಿ ಇರುತ್ತದೆಯೋ ? ಯಾವ ತಕರಾರು ಇಲ್ಲದೆ ಕಣ್ಣು ಮುಚ್ಚಿ ಅವರೂ ಓಡಾಡುತ್ತಾರೆ.ಕನಿಷ್ಠ ಪ್ರಜ್ಞೆ ಇರುವ ಜನಪ್ರತಿ ಅಥವಾ ಅಧಿಕಾರಿ ಇಲ್ಲಿ ಸಂಚರಿಸಲಿಲ್ಲವೋ ಏನೋ ? ಎಂಬ ಅನುಮಾನ ಕಾಡುವುದರಲ್ಲಿ ಅನುಮಾನವಿಲ್ಲ.

ಈ ಅವ್ಯವಸ್ಥೆಯನ್ನು ಪರಿಶೀಲಿಸಬೇಕಾದವರು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದವರು.ಅದರ ಕಚೇರಿ ಪಕ್ಕದ ಹೊಸಪೇಟೆ ನಗರದಲ್ಲಿದೆ.ಅವರೂ ಸಹ ಕಣ್ಣು ಮುಚ್ಚಿ ಓಡಾಡುತ್ತಿದ್ದಾರೆ.

ಕೊಪ್ಪಳ ಸಂಸದರು ಹಿಟ್ನಾಳ ಕ್ರಾಸ್ ಬಳಿ ಇರುವ ಮೂರು ಟೋಲ್ ಪ್ಲಾಜಾಗಳನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಂಭಂದಿಸಿದವರಿಗೆ ಆದೇಶಿಸಬೇಕು.ಆಗ ಮಾತ್ರ ಪ್ರಯಾಣಿಕರಿಗೆ ಒಂದಿಷ್ಟು ಸೌಲಭ್ಯಗಳು ದೊರಕೀಯಾವು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

16 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

16 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

16 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

16 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

17 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

17 hours ago