Give Chairmanship of Veerashaiva Lingayat Development Corporation to Kalyan Karnataka Part : Gangadhar Gowda Patil Navali
ಕನಕಗಿರಿ : ಕಾಂಗ್ರೆಸ್ ಸರಕಾರ ರಚನೆಯಾದಗಿಂದ ಇದುವರೆಗೂ ನಿಗಮಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲಾ ಇದರಿಂದ ದಿನದಿಂದ ದಿನಕ್ಕೆ ಸಚಿವರ ಹಾಗೂ ಕಾಂಗ್ರೇಸ್ ಕಟ್ಟಾಳುಗಳಲ್ಲಿ ನಿಗಮ ಸ್ಥಾನಗಳ ಅಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ ಅದರಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಿಗಿಯವರ ಅತಿ ಆಪ್ತರು ಹಾಗೂ ಕಾಂಗ್ರೇಸ್ ಪಕ್ಷದ ಯುವ ಕಟ್ಟಾಳು ಹಾಗೂ ಮತ್ತು ರೆಡ್ಡಿ ಸಮುದಾಯದ ಪ್ರಬಲ ಮುಖಂಡರಾದ ಗಂಗಾಧರ ಗೌಡ ಪಾಟೀಲ್ ನವಲಿ ಇವರನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಸೂಚಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಾಂತಾಗುತ್ತದೆ ಎಂಬುದು ಈ ಭಾಗದವರ ಅಭಿಪ್ರಾಯವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಅನೇಕ ಪಂಗಡಗಳ ಕುರಿತಾದ ಮಾಹಿತಿಯಿರುವ ಮತ್ತು ಆ ಸಮುದಾಯಗಳ ಅಭಿವೃದ್ದಿಗೆ ಬೇಕಾದ ಯೋಜನೆಗಳನ್ನು ರೂಪಿಸುವ ಹಾಗೂ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲರನ್ನಾಗಿ ಮೇಲೆತ್ತುವ ಆಲೋಚನೆಯುಳ್ಳ ಒಬ್ಬ ಸೂಕ್ತ ವ್ಯಕ್ತಿಎಂದರೆ ಅದು ಗಂಗಾಧರ ಗೌಡ ಪಾಟೀಲ್ ನವಲಿಯಾಗಿದ್ದು ಇವರ ಕುರಿತು ಈ ಭಾಗದ ವೀರಶೈವ ಲಿಂಗಾಯತ ಸಮುದಾಯದವರು ಸಚಿವರ ಮುಂದೆ ಪ್ರಸ್ಥಾಪ ಸಲ್ಲಿಸಲಿದ್ದು. ಮುಂದೆ ಕಾರ್ಯಗತಗೊಳ್ಳುತ್ತಾ ಕಾದು ನೋಡಬೇಕಿದೆ.
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…