ಕೊಪ್ಪಳ ಸುದ್ದಿ

ಕುಮ್ಮಟದುರ್ಗದ ಅಭಿವೃದ್ಧಿ, ಎಸ್.ಟಿ. ಕಛೇರಿ ಸೇರಿ ಅಭಿವೃದ್ಧಿ ಕೆಲಸಕ್ಕೆ ಆಧ್ಯತೆ :ಕಲ್ಲೇಶ.

Development of Kummadadurga, ST. Preferred for development work in office : Kallesha
  


ಕೊಪ್ಪಳ : ಜಿಲ್ಲೆಯ ಐತಿಹಾಸಿಕ ಕ್ಷೇತ್ರ, ತಾಲೂಕಿನ ಜಬ್ಬಲಗುಡ್ಡದ ಮೇಲ್ಭಾಗದಲ್ಲಿರುವ ಗಂಡುಗಲಿ ಕುಮಾರರಾಮನ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವದು ಸೇರಿದಂತೆ ಹಲವು ಕೆಲಸ ಮಾಡಲು ಅಧ್ಯತೆ ನೀಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ ಮೆಣೆದಾಳ ಹೇಳಿದರು.
ಅವರು ಸಮಾಜ ಕಲ್ಯಾಣ ಇಲಾಖೆಗೆ ನೂತನವಾಗಿ ನಿರ್ದೇಶಕರಾದ ಪ್ರಯುಕ್ತ ತಮ್ಮ ಕೊಪ್ಪಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಂದೋಲನ ಸಮಿತಿ ಮೂಲಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಮ್ಮ ಜಿಲ್ಲೆಯ ಜನ ಅಂತಹ ಹುದ್ದೆ ಸ್ವೀಕರಿಸಿದ್ದಕ್ಕೆ ಬಹಳಷ್ಟು ಸಂತೋಷ ಪಟ್ಟಿದ್ದಾರೆ, ಶುಭ ಕೋರಿದ್ದಾರೆ ಅದು ಬಹಳ ಆಂದ ತಂದಿದೆ, ಇನ್ನು ಅಂತಹಸ್ಥಾನದಲ್ಲಿ ಇದ್ದುಕೊಂಡು ಕಾನೂನು ಬದ್ಧವಾಗಿ ಜಿಲ್ಲೆಗೆ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ, ಸರಕಾರ ಮಟ್ಟದಲ್ಲಿ ಪ್ರಯತನ್ ಪಡುತ್ತೇನೆ ಎಂದ ಅವರು. ಜಿಲ್ಲೆಯಲ್ಲಿ ಪ್ರತ್ಯೇಕ ಎಸ್.ಟಿ. ಕಛೇರಿ, ಜಿಲ್ಲೆಯ ಅಲೆಮಾರಿ ಹರಣ ಶಿಕಾರಿ ಜನರಿಗೆ ಸೂರು ಒದಗಿಸುವದು, ಎಸ್.ಟಿ. ಜನರಿಗೆ ಸೌಲಭ್ಯಗಳನ್ನು ಸರಿಯಾಗಿ ಮುಟ್ಟಿಸುವದು ಸೇರಿದಂತೆ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾಗಿ ಶಿಷ್ಯವೇತನ,ವಿದ್ಯಾರ್ಥಿ ವೇತನ ಬರುವಂತೆ ಮಾಡುವದು, ಜಿಲ್ಲೆಯ ಎಸ್.ಟಿ. ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವದಕ್ಕೆ ಅನುಕೂಲ ಒದಗಿಸುವ ಕೆಲಸಕ್ಕೆ ಆಧ್ಯತೆ ನೀಡುವದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಂದೋಲನ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅನೇಕ ಬೇಡಿಕೆಗಳನ್ನು ಇಟ್ಟು ಅದರ ಅವಶ್ಯಕತೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ ಅತ್ಯಂತ ವಿಶಾಲ ಹೃದಯದ, ಸಭ್ಯ ಅಧಿಕಾರಿ ಆಗಿರುವ ಕಲ್ಲೇಶ ಅವರು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಡಿಡಿಯಾಗಿ ಬಹಳ ಕೆಲಸ ಮಾಡಿದ್ದಾರೆ, ಸಮುದಾಯದ ಸಮಸ್ಯೆಗಳ ಅರಿವಿದೆ, ಕೆಳಹಂತದಿಂದ ಕೆಲಸ ಮಾಡಿದ್ದರಿಂದ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ರೂಪಿಸುವ ಭರವಸೆ ಇದೆ ಹಾಗೂ ಜಿಲ್ಲೆಯ ಅಧಿಕಾರಿಯೊಬ್ಬರು ರಾಜ್ಯಮಟ್ಟದ ಸ್ಥಾನಕ್ಕೆ ಬಂದಿರುವದು ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿಸಿದೆ ಎಂದರು.
ಈ ವೇಳೆ ಯುವ ಮುಖಂಡರುಗಳಾದ ಪ್ರಭು ಜಹಗೀರದಾರ, ಮಂಜುನಾಥ ಅನಾಳಪ್ಪ ಪೂಜಾರ, ರವಿಕುಮಾರ ಹ್ಯಾಟಿ ಇತರರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

13 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

13 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

14 hours ago