ಆರೋಗ್ಯ

ಉಚಿತವಾದ ಔಷಧೀಯ ಹಕ್ಕ ರಿಕಿ ತಪ್ಲ(ಸೊಪ್ಪು) ಸೊಪ್ಪು

Free Medicinal Alfalfa Hakka Riki Tapla (Alfalfa)

ಉತ್ತರ ಕರ್ನಾಟಕದಲ್ಲಿ ಹೊಲ ಗದ್ದೆಗಳಲ್ಲಿ ಎಥೆಚ್ಚವಾಗಿ ತನ್ನಿಂದ ತಾನೇ ಬೆಳೆಯುವ ಉಚಿತವಾದ ಔಷಧೀಯ ಸೊಪ್ಪು ಅನ್ನಬಹುದು ನನಗೆ ತಿಳಿದ ಮಟ್ಟಿಗೆ ಇದಕ್ಕಿಂತ ಪ್ರಯೋಜನ ಕಾರಿ ಸೊಪ್ಪು ಇನ್ನೊಂದಿಲ್ಲ
ಅದೇ ಈ ಹಕ್ಕರಿಕಿ(ಹತ್ತರಕಿ) ಸೊಪ್ಪು
ಸಾಕಷ್ಟು ಜನರಿಗೆ ಈಗಾಗಲೇ ಇದರ ಬಗ್ಗೆ ಗೊತ್ತಿರಬಹುದು ಉಳಿದವರಿಗೂ ತಿಳಿಯಲಿ ಅಂತ ಪೋಸ್ಟ್ ಮಾಡಿದೆ ನೀವು ಓದಿ ಮತ್ತೆ ವಿನಿಮಯ ಮಾಡಿ

ಹುಲ್ಲು ಹುಲ್ಲಾಗಿರುವ, ಅಗಲವಾದ ಎಲೆಗಳನ್ನು ಬಿಡುವ, ಟರ‌್ಯಾಕ್ಸಕಮ್ ಅಫಿಷಿನೇಲ್ ಕುಲದ ಸಸ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯ ಮಧ್ಯ ವರ್ಷವಿಡೀ ತಾನೇ ತಾನಾಗಿ ಹುಟ್ಟಿ ಬೆಳೆಯುವ ಸೊಪ್ಪಿನ ಗಿಡವಿದು. (ಆದರೆ, ಬೇರೆ ಸೊಪ್ಪಿನ ರೀತಿ ಇದನ್ನು ಮಾರಾಟಕ್ಕೆಂದು ಬೆಳೆಯುವುದಿಲ್ಲ.) ಹೊಲದಲ್ಲಿ ಕೆಲಸ ಮಾಡುವವರಿಗೆ ಊಟದ ಜತೆಗಿನ ಸೈಡ್ಸ್ ಆಗಿ ಬಳಕೆ. ಆಡು ಭಾಷೆಯಲ್ಲಿ ಹಕ್ಕರಿಕೆ ಎಂದು ಕರೆಯುತ್ತಾರೆ. ಈ ಸೊಪ್ಪಿನ ಇಂಗ್ಲಿಷ್ ಹೆಸರೇ ದಾಂಡೇಲಿಯನ್ ಗ್ರೀನ್ಸ್. ಇದರ ಎಲೆಗಳು ಅತಿ ಹೆಚ್ಚು ಪ್ರೊಟೀನ್ ಅಂಶ ಒಳಗೊಂಡಿವೆ. ಎಲೆ ಮತ್ತು ಬೇರಿನಲ್ಲಿರುವ ಹೆಚ್ಚಿನ ಅಂಶಗಳೆಂದರೆ, ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶ. ಏಡ್ಸ್ ಮತ್ತು ಹರ್ಪಿಸ್ ಕಾಯಿಲೆ ಹರಡಲು ಕಾರಣವಾಗುವ ವೈರಸ್ ಅನ್ನು ನಾಶಪಡಿಸುವ ರೋಗನಿರೋಧಕ ಗುಣ ಈ ಸೊಪ್ಪಿನಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಗೆ, ದೀರ್ಘಕಾಲದ ಕಾಯಿಲೆಗಳಿಗೆ ಔಷಧದಂತೆ ವರ್ತಿಸುತ್ತದೆ. ರೋಗ ಬರದಂತೆ ತಡೆಯುವ ನೈಸರ್ಗಿಕ ಪರಿಹಾರ ಗುಣ ಇದಕ್ಕಿದೆ. ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸುತ್ತದೆ. ನರಮಂಡಲದ ಮೇಲೆ ಪ್ರಯೋಜನಕಾರಿ ಪರಿಣಾಮ ಉಂಟುಮಾಡಿ, ನಿದ್ರೆ ಬರುವಂತೆ ಮಾಡುತ್ತದೆ. ರಕ್ತ ಹೆಚ್ಚಿಸುತ್ತದೆ. ಚರ್ಮದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಚಿಗುರಿನಿಂದ ಬೇರಿನವರೆಗೆ ಔಷಧೀಯ ಗುಣಗಳನ್ನೇ ಹೊಂದಿದೆ. ಇದರ ಉಪಯುಕ್ತತೆಯನ್ನು ಕೇಳಿದರೆ, ಊಟದ ಬದಲು ಸೊಪ್ಪನ್ನೇ ತಿಂದು ಬದುಕಬೇಕು ಎನಿಸುತ್ತದಲ್ಲವೇ?

ಬಸವರಾಜ್ ಧಾರವಾಡ ,ಮಲ್ಲಿಕಾರ್ಜುನ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

5 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

5 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

5 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

5 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

5 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

5 hours ago